ಬದಿಯಡ್ಕ: ಭಾರತದ ಪ್ರಥಮ ಪ್ರಧಾನಮಂತ್ರಿ, ನವಭಾರತ ಶಿಲ್ಪಿ ಜವಾಹರಲಾಲ್ ನೆಹರು ಅವರ 57ನೇ ಪುಣ್ಯತಿಥಿ ಕಾರ್ಯಕ್ರಮ ಬದಿಯಡ್ಕ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ ಕಚೇರಿಯಲ್ಲಿ ಜರಗಿತು.
ಬದಿಯಡ್ಕ ಮಂಡಲ ಕಾಂಗ್ರೆಸ್ ಅಧ್ಯಕ್ಷ ನಾರಾಯಣ ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು. ಕಾರಡ್ಕ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಹಿರಿಯ ನೇತಾರ ಚಂದ್ರಹಾಸ ರೈ ಪಿ.ಜಿ, ಕುಂಜಾರು ಮಹಮ್ಮದ್ ಹಾಜಿ, ಪಂಚಾಯತಿ ಉಪಾಧ್ಯಕ್ಷ ಎಂ ಅಬ್ಬಾಸ್, ಖಾದರ್ ಮಾನ್ಯ, ದಲಿತ ಕಾಂಗ್ರೆಸ್ ನೇತಾರ ಐತಪ್ಪ ಚೆನ್ನೇಗುಳಿ,ಕಾಂಗ್ರೆಸ್ ಅಧ್ಯಾಪಕ ಸಂಘದ ನೇತಾರ ನಿರಂಜನ್ ರೈ, ಕೆ.ಎಸ್.ಯು ನೇತಾರ ಶ್ರೀನಾಥ್ ಮಾತನಾಡಿದರು. ಮಂಡಲ ಕಾಂಗ್ರೆಸ್ ಉಪಾಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಸ್ವಾಗತಿಸಿ, ಉಪಾಧ್ಯಕ್ಷ ಪಿ.ಜಿ ಜಗನ್ನಾಥ ರೈ ವಂದಿಸಿದರು.


