HEALTH TIPS

ರಾಜ್ಯದಲ್ಲಿ ಇಂದು 12,443 ಮಂದಿಗೆ ಕೋವಿಡ್ ಸೋಂಕು ಪತ್ತೆ: 13,145 ಮಂದಿ ಗುಣಮುಖ: ಪರೀಕ್ಷಾ ಸಕಾರಾತ್ಮಕ ದರ ಶೇ.10.22

           ತಿರುವನಂತಪುರ: ರಾಜ್ಯದಲ್ಲಿ ಇಂದು 12,443 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ತಿರುವನಂತಪುರ 1777, ಎರ್ನಾಕುಳಂ 1557, ತ್ರಿಶೂರ್ 1422, ಮಲಪ್ಪುರಂ 1282, ಕೊಲ್ಲಂ 1132, ಪಾಲಕ್ಕಾಡ್ 1032, ಕೋಝಿಕೋಡ್ 806, ಆಲಪ್ಪುಳ 796, ಕೊಟ್ಟಾಯಂ 640, ಕಣ್ಣೂರು 527, ಕಾಸರಗೋಡು 493, ಪತ್ತನಂತಿಟ್ಟು 433, ಇಡುಕ್ಕಿ 324, ವಯನಾಡ್ 222 ಎಂಬಂತೆ ಸೋಂಕು ಕಂಡುಬಂದಿದೆ.

                ಕಳೆದ 24 ಗಂಟೆಗಳಲ್ಲಿ 1,21,743 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ.10.22 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,18,53,900 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.

                ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ 115 ಮಂದಿ ಸಾವನ್ನಪ್ಪಿದ್ದಾರೆ.  ಒಟ್ಟು ಸಾವಿನ ಸಂಖ್ಯೆ  11,948 ಕ್ಕೆ ಏರಿಕೆಯಾಗಿದೆ. 

       ಇಂದು, ಸೋಂಕು ಪತ್ತೆಯಾದವರಲ್ಲಿ 78 ಮಂದಿ ರಾಜ್ಯದ ಹೊರಗಿಂದ ಬಂದÀವರು. ಸಂಪರ್ಕದ ಮೂಲಕ 11,639 ಮಂದಿ ಜನರಿಗೆ ಸೋಂಕು ತಗುಲಿತು. 653 ಮಂದಿಯ ಸಂಪರ್ಕ ಮೂಲಗಳು ಸ್ಪಷ್ಟವಾಗಿಲ್ಲ. ತಿರುವನಂತಪುರ 1624, ಎರ್ನಾಕುಳಂ 1512, ತ್ರಿಶೂರ್ 1404, ಮಲಪ್ಪುರಂ 1248, ಕೊಲ್ಲಂ 1123, ಪಾಲಕ್ಕಾಡ್ 636, ಕೋಝಿಕೋಡ್ 795, ಆಲಪ್ಪುಳ 791, ಕೊಟ್ಟಾಯಂ 624, ಕಣ್ಣೂರು 463, ಕಾಸರಗೋಡು 479, ಪತ್ತನಂತಿಟ್ಟು 422, ಇಡುಕ್ಕಿ 308, ವಯನಾಡ್ 210 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.

            ಇಂದು 73 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿರುವುದು ಕಂಡುಬಂದಿದೆ. ಕಣ್ಣೂರು 15, ತ್ರಿಶೂರ್, ಕಾಸರಗೋಡು 10, ತಿರುವನಂತಪುರ 8, ಕೊಲ್ಲಂ 7, ಪತ್ತನಂತಿಟ್ಟು, ಎರ್ನಾಕುಳಂ ತಲಾ 6, ಪಾಲಕ್ಕಾಡ್, ವಯನಾಡ್ ತಲಾ 4, ಕೊಟ್ಟಾಯಂ, ಇಡುಕ್ಕಿ ಮತ್ತು ಕೋಝಿಕೋಡ್ ತಲಾ 1 ಎಂಬಂತೆ ಸೋಂಕು ಬಾಧಿಸಿದೆ. 

         ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 13,145 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 1659, ಕೊಲ್ಲಂ 1398, ಪತ್ತನಂತಿಟ್ಟು 541, ಆಲಪ್ಪುಳ 1376, ಕೊಟ್ಟಾಯಂ 552, ಇಡುಕ್ಕಿ 533, ಎರ್ನಾಕುಳಂ 1010, ತ್ರಿಶೂರ್ 935, ಪಾಲಕ್ಕಾಡ್ 1236, ಮಲಪ್ಪುರಂ 1560, ಕೊಝಿಕೋಡ್ 1232, ವಯನಾಡ್  239, ಕಣ್ಣೂರು 341, ಕಾಸರಗೋಡು 533 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 1,06,861 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 26,78,499 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

             ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 4,55,621 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 4,27,754 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 27,867 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 2282 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

                 ಟಿಪಿಆರ್ ಆಧಾರಿತ ಪ್ರದೇಶಗಳು ಹಿಂದಿನ ದಿನದಂತೆಯೇ ಮುಂದುವರಿಯುತ್ತಿವೆ. ಟಿಪಿಆರ್ 8 ರ ಕೆಳಗೆ 178, ಟಿಪಿಆರ್. 8 ರಿಂದ 20 ರ ನಡುವೆ 633, ಟಿಪಿಆರ್. 20 ರಿಂದ 30ರ ಮಧ್ಯೆ 208 , ಟಿಪಿಆರ್. 30 ಮತ್ತು ಅದಕ್ಕಿಂತ ಹೆಚ್ಚಿನ 16 ಸ್ಥಳೀಯಾಡಳಿತ ಸಂಸ್ಥೆಗಳು ಇವೆ. ಸ್ಥಳೀಯಾಡಳಿತ ಪ್ರದೇಶಗಳಲ್ಲಿ ಟಿಪಿಆರ್ ಆಧಾರಿತ ಪರೀಕ್ಷೆಯನ್ನು ಸಹ ಹೆಚ್ಚಿಸಲಾಗುವುದು.

                ತಿರುವನಂತಪುರದ ಅತಿಯನ್ನೂರ್, ಅಜೂರ್, ಕತಿನಂಕುಳಂ, ಕರೋಡೆ, ಮನಂಪುರ, ಮಂಗಳಾಪುರ, ಪನವೂರ್, ಪೊತೆನ್ ಕೋಡ್, ಎರ್ನಾಕುಳಂನ  ಚಿತ್ತತುಕಾರ, ಪಾಲಕ್ಕಾಡ್ ನ  ನಾಗಲಸೇರಿ, ನೆನ್ಮಾರಾ, ವಲ್ಲಾಪುಳ, ಮಲಾಪುರ, ಮೋಡುಪಯೂg, ವಯನಾಡು ಜಿಲ್ಲೆಯ ಮುಪ್ಪನಾಡ್, ಕಾಸರಗೋಡು ಜಿಲ್ಲೆಯ ಬೇಡಡ್ಕ, ಮಧೂರು ಗ್ರಾ.ಪಂ. ಗಳು ಟಿಪಿಆರ್ 30ಕ್ಕಿಂತಲೂ ಮೇಲಿರುವ ಪ್ರದೇಶಗಳಾಗಿವೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries