HEALTH TIPS

ಕಾಸರಗೋಡು ಸೇರಿದಂತೆ ಕೇರಳದ ವಿವಿಧ ಜಿಲ್ಲೆಗಳಲ್ಲಿ ನಾಳೆಯಿಂದ ಬಿರುಸಿನ ಮಳೆಗೆ ಸಾಧ್ಯತೆ

            ಕಾಸರಗೋಡು: ಬಂಗಾಳ ಆಳಸಮುದ್ರದಲ್ಲಿ ವಾಯುಭಾರಕುಸಿತದ ಪರಿಣಾಮ ಕೇರಳದಲ್ಲಿ ಜೂನ್ 11ರಿಂದ 15ರ ವರೆಗೆ ಬಿರುಸಿನ ಮಳೆಯಾಗುವ ಸಾಧ್ಯತೆ ಬಗ್ಗೆ ಕೇಂದ್ರ ಹವಾಮಾನ ಇಲಾಖೆ 


 

ಮುನ್ನೆಚ್ಚರಿಕೆ ನೀಡಿದೆ. ಕಾಸರಗೋಡು  ಸೇರಿದಂತೆ ಕೇರಳದ ಕೆಲವೊಂದು ಜಿಲ್ಲೆಗಳಲ್ಲಿ 11ರಿಂದ ಬಿರುಸಿನ ಮಳೆಯಾಗಲಿದೆ. ಈ ಕಾಲಾವಧಿಯಲ್ಲಿ ಸಮುದ್ರದಲ್ಲಿ 2.5ರಿಂದ 3.2ಮೀ. ಎತ್ತರದ ವರೆಗೂ ಅಲೆಗಳು ಎದ್ದೇಳುವ ಸಾಧ್ಯತೆಯಿದ್ದು, ಮೀನುಗಾರರು ಸಮುದ್ರಕ್ಕೆ ತೆರಳದಂತೆ ಹಾಗೂ ಕರಾವಳಿಯಲ್ಲಿ ವಾಸಿಸುತ್ತಿರುವರು ಸುರಕ್ಷಿತ ಜಾಗಕ್ಕೆ ಸ್ಥಳಾಂತರಗೊಳ್ಳುವಂತೆಯೂ ಕಾಸರಗೋಡು ಜಿಲ್ಲಾ ಮೀನುಗಾರಿಕಾ ಇಲಾಖೆ ಪ್ರಕಟಣೆ ತಿಳಿಸಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries