ತಿರುವನಂತಪುರ: ವಿದ್ಯಾರ್ಥಿಗಳು ವರ್ಗಾವಣೆ ಪ್ರಮಾಣಪತ್ರವನ್ನು ಕೇಳಿದರೆ ಶಾಲಾ ಅಧಿಕಾರಿಗಳು ಅದನ್ನು ನಿರಾಕರಿಸಬಾರದು ಎಂದು ಸಚಿವ ವಿ.ಶಿವಂಕುಟ್ಟಿ ಹೇಳಿರುವರು. ಶಿಕ್ಷಣ ಹಕ್ಕು ಕಾಯ್ದೆಯಡಿ, ಎಲ್ಲಾ ಸಂಸ್ಥೆಗಳು ವಿದ್ಯಾರ್ಥಿ ಕೋರಿದರೆ ಟಿಸಿ ನೀಡದಿರಲು ಸಾಧ್ಯವಿಲ್ಲ ಎಮದು ಸಚಿವರು ತಿಳಿಸಿರುವರು.
ಕೆಲವು ಅನುದಾನರಹಿತ ಸಂಸ್ಥೆಗಳು ಟಿಸಿಯನ್ನು ನಿರಾಕರಿಸುತ್ತಿವೆ ಎಂಬ ದೂರುಗಳು ಬಂದಿವೆ ಎಂದು ಸಚಿವರು ಹೇಳಿದರು. ಟಿಸಿ ಪಡೆಯದ ವಿದ್ಯಾರ್ಥಿಯ ಯುಐಡಿಯನ್ನು ತಾನು ಅಧ್ಯಯನ ಮಾಡಲು ಬಯಸುವ ಸಂಸ್ಥೆಗೆ ವರ್ಗಾಯಿಸಲು ಸಾರ್ವಜನಿಕ ಶಿಕ್ಷಣ ನಿರ್ದೇಶಕರು ಆದೇಶಿಸಿದ್ದಾರೆ.
ಇದೇ ವೇಳೆ, ಕೋವಿಡ್ ಅವಧಿಯಲ್ಲಿ ಕೆಲವು ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಇನ್ನೂ ಹೆಚ್ಚಿನ ಶುಲ್ಕವನ್ನು ವಿಧಿಸುತ್ತವೆ ಎಂಬ ದೂರುಗಳಿವೆ. ಶಿಕ್ಷಣ ಸಂಸ್ಥೆ ವ್ಯವಸ್ಥಾಪಕರು ಇಂತಹ ನಿರ್ಧಾರಗಳಿಂದ ಹಿಂದೆ ಸರಿಯುವಂತೆ ಸಚಿವರು ಮನವಿ ಮಾಡಿರುವರು.