HEALTH TIPS

ರಾಜ್ಯದಲ್ಲಿ ಕೋವಿಡ್ ಟಿಪಿಆರ್ ಮತ್ತೆ 11 ಕ್ಕಿಂತ ಮೇಲೆ!: ಇಂದು, 9,931 ಮಂದಿ ಜನರಿಗೆ ಸೋಂಕು ಪತ್ತೆ: 13,206 ಮಂದಿ ಜನರು ಚೇತರಿಕೆ: ಪರೀಕ್ಷಾ ಸಕಾರಾತ್ಮಕ ದರ ಶೇ.11.08

               ತಿರುವನಂತಪುರ: ರಾಜ್ಯದಲ್ಲಿ ಇಂದು 9,931 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಮಲಪ್ಪುರಂ 1615, ಕೋಝಿಕೋಡ್ 1022, ತ್ರಿಶೂರ್ 996, ಎರ್ನಾಕುಳಂ 921, ಪಾಲಕ್ಕಾಡ್ 846, ಕೊಲ್ಲಂ 802, ತಿರುವನಂತಪುರ 700, ಕಣ್ಣೂರು 653, ಕಾಸರಗೋಡು 646, ಆಲಪ್ಪುಳ 613, ಕೊಟ್ಟಾಯಂ 484, ವಯನಾಡು 247, ಪತ್ತನಂತಿಟ್ಟು 239, ಇಡುಕ್ಕಿ 147 ಎಂಬಂತೆ ಸೋಂಕು ದೃಢಪಡಿಸಲಾಗಿದೆ. 

        ಕಳೆದ 24 ಗಂಟೆಗಳಲ್ಲಿ 89,654 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇ.11.08 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,54,31,248 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.

      ಕಳೆದ 24 ಗಂಟೆಗಳಲಲಿ ಕೋವಿಡ್ ಬಾಧಿಸಿ 58 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಸಂಖ್ಯೆ 15,408 ಕ್ಕೆ ಏರಿಕೆಯಾಗಿದೆ. 

        ಇಂದು, ಸೋಂಕು ನಿರ್ಣಯ ಮಾಡಿದವರಲ್ಲಿ 31 ಮಂದಿ ಜನರು ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 9,202 ಮಂದಿ ಜನರಿಗೆ ಸೋಂಕು ತಗುಲಿತು. 632 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 1589, ಕೋಝಿಕೋಡ್ 998, ತ್ರಿಶೂರ್ 985, ಎರ್ನಾಕುಳಂ 896, ಪಾಲಕ್ಕಾಡ್ 411, ಕೊಲ್ಲಂ 797, ತಿರುವನಂತಪುರ 678, ಕಣ್ಣೂರು 553, ಕಾಸರಗೋಡು 628, ಆಲಪ್ಪುಳ 602, ಕೊಟ್ಟಾಯಂ 460, ವಯನಾಡ್ 233, ವಯನಾಡ್ 233, ಪತ್ತನಂತಿಟ್ಟು 232, ಇಡುಕ್ಕಿ 140 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ. 

     ಇಂದು 66 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ. ಕಣ್ಣೂರು 19, ಕಾಸರಗೋಡು 10, ತ್ರಿಶೂರ್, ಕೋಝಿಕೋಡ್, ವಯನಾಡ್ ತಲಾ 8, ಕೊಲ್ಲಂ, ಪತ್ತನಂತಿಟ್ಟು, ಎರ್ನಾಕುಳಂ ತಲಾ 3, ಪಾಲಕ್ಕಾಡ್ 2, ಕೊಟ್ಟಾಯಂ ಮತ್ತು ಇಡುಕಿ ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಕಂಡುಬಂದಿದೆ. 

         ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 13,206 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 1132, ಕೊಲ್ಲಂ 975, ಪತ್ತನಂತಿಟ್ಟು 447, ಆಲಪ್ಪುಳ 605, ಕೊಟ್ಟಾಯಂ 539, ಇಡುಕ್ಕಿ 196, ಎರ್ನಾಕುಳಂ 1197, ತ್ರಿಶೂರ್ 1429, ಪಾಲಕ್ಕಾಡ್ 799, ಮಲಪ್ಪುರಂ 2504, ಕೋಝಿಕೋಡ್ 1718, ವಯನಾಡ್ 426, ಕಣ್ಣೂರು 682, ಕಾಸರಗೋಡು 557 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 1,21,708 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 30,33,258 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

           ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 4,06,804 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 3,82,081 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 24,723 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 2137 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

        ಟಿಪಿಆರ್ 5ಕ್ಕಿಂತ ಕೆಳಗೆ 83, ಟಿಪಿಆರ್  5 ರಿಂದ 10 ರ ನಡುವೆ 384, ಟಿಪಿಆರ್. 10 ರಿಂದ 15 ರ ನಡುವೆ 362, ಟಿಪಿಆರ್. 15 ಕ್ಕಿಂತ ಮೇಲೆ 205 ಸ್ಥಳೀಯಾಡಳಿತ ಸಂಸ್ಥೆಗಳು ಈಗ ರಾಜ್ಯದಲ್ಲಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries