HEALTH TIPS

ರಾಜ್ಯದಲ್ಲಿ ಇಂದು 13,956 ಮಂದಿಗೆ ಕೋವಿಡ್ ಪತ್ತೆ; 13,613 ಮಂದಿ ಚೇತರಿಕೆ:ಪರೀಕ್ಷಾ ಸಕಾರಾತ್ಮಕ ದರ ಶೇ.10.69

   
       ತಿರುವನಂತಪುರ: ರಾಜ್ಯದಲ್ಲಿ  ಇಂದು13,956 ಮಂದಿ ಜನರಿಗೆ ಕೋವಿಡ್  ಖಚಿತಪಡಿಸಲಾಗಿದೆ.  ಮಲಪ್ಪುರಂ 2271, ಕೋಝಿಕೋಡ್ 1666, ಎರ್ನಾಕುಳಂ 1555, ತ್ರಿಶೂರ್ 1486, ಕೊಲ್ಲಂ 1026, ತಿರುವನಂತಪುರ 977, ಪಾಲಕ್ಕಾಡ್ 952, ಕಣ್ಣೂರು 797, ಆಲಪ್ಪುಳ 786, ಕೊಟ್ಟಾಯಂ 670, ಕಾಸನಗೋಡು 636, ವಯನಾಡ್ 473, ಪತ್ತನಂತಿಟ್ಟು  342, ಇಡುಕ್ಕಿ 319 ಎಂಬಂತೆ ಸೋಂಕು ಬಾಧಿಸಿದೆ.
      ಗುಂಪು ಪರೀಕ್ಷೆ ಸೇರಿದಂತೆ ಕಳೆದ 24 ಗಂಟೆಗಳಲ್ಲಿ 1,30,553 ಮಾದರಿಗಳನ್ನು ಪರೀಕ್ಷಿಸಲಾಯಿತು.  ಪರೀಕ್ಷಾ ಸಕಾರಾತ್ಮಕ ದರ ಶೇ. 10.69 ಆಗಿದೆ.  ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ.  ಪಿಸಿಆರ್, ಆರ್ಟಿ  LAMP ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,53,41,594 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
   ಕಳೆದ  24 ಗಂಟೆಗಳಲ್ಲಿ 81 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 15,350 ಕ್ಕೆ ಏರಿಕೆಯಾಗಿದೆ.
       ಇಂದು, ಸೋಂಕು ಪತ್ತೆಯಾದವರಲ್ಲಿ 75 ಮಂದಿ ರಾಜ್ಯದ ಹೊರಗಿಂದ ಬಂದವರು.  ಸಂಪರ್ಕದ ಮೂಲಕ 13,214 ಮಂದಿ ಜನರಿಗೆ ಸೋಂಕು ತಗುಲಿದೆ.  617 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ.  ಮಲಪ್ಪುರಂ 2203, ಕೋಝಿಕೋಡ್ 1646, ಎರ್ನಾಕುಳಂ 1540, ತ್ರಿಶೂರ್ 1475, ಕೊಲ್ಲಂ 1022, ತಿರುವನಂತಪುರ 905, ಪಾಲಕ್ಕಾಡ್ 607, ಕಣ್ಣೂರು 706, ಆಲಪ್ಪುಳ 748, ಕೊಟ್ಟಾಯಂ 633, ಕಾಸರಗೋಡು 624, ವಯನಾಡ್ 467, ಪತ್ತನಂತಿಟ್ಟು 330, ಇಡುಕ್ಕಿ 308 ಎಂಬಂತೆ ಸಂಪರ್ಕದಿಂದ ಸೋಂಕು ಉಂಟಾಗಿದೆ.
      ಇಂದು  50 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ. ಕಣ್ಣೂರು 10, ತ್ರಿಶೂರ್, ಕಾಸರಗೋಡು ತಲಾ 6, ಪತ್ತನಂತಿಟ್ಟು 5, ಕೊಲ್ಲಂ, ಆಲಪ್ಪುಳ, ವಯನಾಡ್ ತಲಾ 4, ಕೊಟ್ಟಾಯಂ 3, ತಿರುವನಂತಪುರ, ಪಾಲಕ್ಕಾಡ್, ಕೋಝಿಕೋಡ್ ತಲಾ 2, ಇಡುಕಿ ಮತ್ತು ಎರ್ನಾಕುಳಂ ತಲಾ 1 ಎಂಬಂತೆ ಸೋಂಕು ಕಂಡುಬಂದಿದೆ.
        ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 13,613 ಮಂದಿ ಜನರು  ಗುಣಮುಖರಾಗಿರುವರು.  ತಿರುವನಂತಪುರ 1133, ಕೊಲ್ಲಂ 1499, ಪತ್ತನಂತಿಟ್ಟು 418, ಆಲಪ್ಪುಳ 450, ಕೊಟ್ಟಾಯಂ 599, ಇಡುಕಿ 235, ಎರ್ನಾಕುಳಂ 1224, ತ್ರಿಶೂರ್ 1539, ಪಾಲಕ್ಕಾಡ್ 833, ಮಲಪ್ಪುರಂ 2299, ಕೋಝಿಕೋಡ್ 1686, ವಯನಾಡ್ 352, ಕಣ್ಣೂರು 670, ಕಾಸರಗೋಡು 676 ಎಂಬಂತೆ ಗುಣಮುಖರಾಗಿದ್ದಾರೆ.  ಇದರೊಂದಿಗೆ 1,25,041ಮಂದಿ  ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.  30,20,052 ಮಂದಿ  ಈವರೆಗೆ ಕೋವಿಡ್‌ನಿಂದ ಮುಕ್ತರಾಗಿದ್ದಾರೆ.
        ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 4,05,176 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ.  ಈ ಪೈಕಿ 3,80,382 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 24,794 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಇಂದು 2005 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
       ಟಿಪಿಆರ್ 5 ಕ್ಕಿಂತ ಕೆಳಗೆ  83,  5 ರಿಂದ 10 ರ ನಡುವೆ 384, 10 ರಿಂದ 15 ರ ನಡುವೆ 362, 15 ಕ್ಕಿಂತ ಮೇಲೆ 205 ಸ್ಥಳೀಯಾಡಳಿತ ಸಂಸ್ಥೆಗಳು ರಾಜ್ಯದಲ್ಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries