HEALTH TIPS

ರಾಜ್ಯದ 15 ಸ್ಥಳೀಯಾಡಳಿತ ವಾರ್ಡ್‍ಗಳಲ್ಲಿ ಉಪಚುನಾವಣೆ; ಜುಲೈ 23 ರವರೆಗೆ ನಾಮಪತ್ರ ಸಲ್ಲಿಕೆ

           ತಿರುವನಂತಪುರ: ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್‍ಗಳಲ್ಲಿ ಉಪಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿದೆ. 9 ಜಿಲ್ಲೆಗಳ 15 ಸ್ಥಳೀಯಾಡಳಿತ ವಾರ್ಡ್‍ಗಳಲ್ಲಿ ಆಗಸ್ಟ್ 11 ರಂದು ಚುನಾವಣೆ ನಡೆಯಲಿದೆ. ಕೊರೋನಾ ಶಿಷ್ಟಾಚಾರಕ್ಕೆ ಅನುಸಾರವಾಗಿ ಚುನಾವಣಾ ಕಾರ್ಯವಿಧಾನಗಳನ್ನು ಪೂರ್ಣಗೊಳಿಸುವಂತೆ ಆಯೋಗವು ಸಂಬಂಧಪಟ್ಟ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

              ಪತ್ತನಂತಿಟ್ಟು,  ಆಲಪ್ಪುಳ, ಕೊಟ್ಟಾಯಂ, ಎರ್ನಾಕುಳಂ, ಮಲಪ್ಪುರಂ, ಕೋಝಿಕೋಡ್ ಮತ್ತು ಕಣ್ಣೂರು ಜಿಲ್ಲೆಗಳ 11 ಗ್ರಾಮ ಪಂಚಾಯತ್ ವಾರ್ಡ್‍ಗಳು, ಮಲಪ್ಪುರಂ ಜಿಲ್ಲೆಯ ಒಂದು ಬ್ಲಾಕ್ ಪಂಚಾಯತ್ ವಾರ್ಡ್ ಮತ್ತು ತಿರುವನಂತಪುರ ಮತ್ತು ಎರ್ನಾಕುಳಂನ 3 ಪುರಸಭೆ ವಾರ್ಡ್‍ಗಳಲ್ಲಿ ಉಪ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಮಾದರಿ ನೀತಿ ಸಂಹಿತೆ ನಿನ್ನೆಯಿಂದಲೇ ಜಾರಿಗೆ ಬಂದಿದೆ.

                  ಚುನಾವಣಾ ಅಧಿಸೂಚನೆಯನ್ನು ಈ ತಿಂಗಳ 16 ರಂದು ನೀಡಲಾಗುವುದು. ಜುಲೈ 23 ರವರೆಗೆ ನಾಮಪತ್ರ ಸಲ್ಲಿಸಬಹುದು. ಉಮೇದುವಾರಿಕೆಯನ್ನು ಹಿಂಪಡೆಯಲು ಕೊನೆಯ ದಿನಾಂಕ ಜುಲೈ 28 ಆಗಿದೆ. ಆಗಸ್ಟ್ 11 ರಂದು ಬೆಳಿಗ್ಗೆ 7:00 ಗಂಟೆಗೆ ಮತದಾನ ಪ್ರಾರಂಭವಾಗುತ್ತದೆ ಮತ್ತು ಸಂಜೆ 6:00 ಕ್ಕೆ ಕೊನೆಗೊಳ್ಳುತ್ತದೆ. ಮತ ಎಣಿಕೆ ಆಗಸ್ಟ್ 12 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries