HEALTH TIPS

ಕರುವಾಣ್ಣೂರ್ ಬ್ಯಾಂಕ್ ವಂಚನೆ; ಮುಖ್ಯ ಆರೋಪಿಗಳು ಪೋಲೀಸ್ ವಶಕ್ಕೆ

                   ತ್ರಿಶೂರ್: ಕರುವಾಣ್ಣೂರು ಸಹಕಾರಿ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿಗಳು ಪೋಲೀಸ್ ಕಸ್ಟಡಿಯಲ್ಲಿದ್ದಾರೆ. ತ್ರಿಶೂರ್‍ನ ಅಯ್ಯಂತೋಲ್ ನಲ್ಲಿರುವ ಫ್ಲ್ಯಾಟ್‍ನಿಂದ ಆರೋಪಿಗಳನ್ನು ಬಂಧಿಸಲಾಗಿದೆ. ನಾಲ್ವರು ಆರೋಪಿಗಳು ಬಂಧನದಲ್ಲಿದ್ದಾರೆ. ಮೊದಲ ಆರೋಪಿ ಸುನೀಲ್ ಕುಮಾರ್ ಮತ್ತು ಎರಡನೇ ಆರೋಪಿ ಬಿಜು, ಗೈಲ್ಸ್ ಮತ್ತು ಬಿಜಾಯ್ ಅವರನ್ನು ಬಂಧಿಸಲಾಗಿದೆ.

              ಆರೋಪಿಗಳು ಶನಿವಾರ ಅಯ್ಯಂತೋಲ್ ನ ಸೂಪರ್ ಮಾರ್ಕೆಟ್‍ಗೆ ಬಂದಿದ್ದರು. ಸಿಸಿಟಿವಿ ದೃಶ್ಯಾವಳಿ ಆಧಾರಿತ ತನಿಖೆಯ ವೇಳೆ ಶಂಕಿತರನ್ನು ಬಂಧಿಸಲಾಗಿದೆ. ಆರೋಪಿಗಳ ಬಂಧನವನ್ನು ನಿನ್ನೆ ಸಂಜೆ ದಾಖಲಿಸಲಾಯಿತು. 

               100 ಕೋಟಿ ವಂಚನೆ ಪತ್ತೆಯಾಗಿದೆ. ಇದರ ಹಿನ್ನೆಲೆಯಲ್ಲಿ ಬ್ಯಾಂಕಿನ ನಿರ್ದೇಶಕರ ಮಂಡಳಿಯನ್ನು ವಿಸರ್ಜಿಸಲಾಯಿತು. ಮಂಡಳಿಯು ಹಗರಣದಲ್ಲಿ ಭಾಗಿಯಾಗಿದೆ ಎಂದು ಸ್ಪಷ್ಟವಾದ ಹಿನ್ನೆಲೆಯಲ್ಲಿ  ಮಂಡಳಿಯನ್ನು ವಿಸರ್ಜಿಸಲಾಯಿತು.

                ಘಟನೆಗೆ ಸಂಬಂಧಿಸಿದಂತೆ ಬ್ಯಾಂಕ್ ಕಾರ್ಯದರ್ಶಿ ಸೇರಿದಂತೆ ನಾಲ್ವರನ್ನು ಅಮಾನತುಗೊಳಿಸಲಾಗಿದೆ. ಮಾಜಿ ಕಾರ್ಯದರ್ಶಿ ಸುನಿಲ್ ಕುಮಾರ್, ಮಾಜಿ ಶಾಖಾ ವ್ಯವಸ್ಥಾಪಕ ಬಿಜು, ಮಾಜಿ ಹಿರಿಯ ಅಕೌಂಟೆಂಟ್ ಗೈಲ್ಸ್ ಮತ್ತು ಸೂಪರ್ಮಾರ್ಕೆಟ್ ಮಾಜಿ ಅಕೌಂಟೆಂಟ್ ಗಳಾದ ರೆಜಿ ಅನಿಲ್, ಕಿರಣ್ ಮತ್ತು ಬಿಜಾಯ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಲ್ಲಿ ಮೂವರು ಸಿಪಿಎಂ ಸದಸ್ಯರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries