HEALTH TIPS

ಕೇರಳದಲ್ಲಿ ಝಿಕಾ ವೈರಸ್ ವ್ಯಾಪಕತೆ: ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹೆಚ್ಚಿದ ಭದ್ರತೆ: ಹೆಚ್ಚಿನ ಜಾಗರೂಕತೆಗೆ ಕೇಂದ್ರ ನಿರ್ದೇಶನ

               ತಿರುವನಂತಪುರ: ಕೇರಳದಲ್ಲಿ ಝಿಕಾ ವೈರಸ್ ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಜಾಗರೂಕತೆಯನ್ನು ಹೆಚ್ಚಿಸಿವೆ. ಕೇರಳದ ಗಡಿ ಪ್ರದೇಶಗಳಲ್ಲಿ ತಪಾಸಣೆ ತೀವ್ರಗೊಂಡಿದೆ. ತಮಿಳುನಾಡು ಆರೋಗ್ಯ ಇಲಾಖೆಯು ಪೋಲೀಸರ ನೆರವಿನೊಂದಿಗೆ ತಪಾಸಣೆಗೆ ಮುಂದಾಗಿದೆ ಎಂದು ವರದಿಯಾಗಿದೆ.

                 ಝಿಕಾ ವೈರಸ್ ವರದಿಯ ಹಿನ್ನೆಲೆಯಲ್ಲಿ ಕೇರಳದಿಂದ ಆಗಮಿಸುತ್ತಿರುವವರ ಮೇಲೆ ತಮಿಳುನಾಡು ನಿಯಂತ್ರಣಗಳನ್ನು ಬಿಗಿಗೊಳಿಸಿದೆ. ತಮಿಳುನಾಡಿನಲ್ಲಿ ಇ-ಪಾಸ್ ಇಲ್ಲದವರಿಗೆ ಕಾಳಿಕಾವಿಲಾ ಗಡಿ ದಾಟಲು ಅವಕಾಶವಿಲ್ಲ. ಏತನ್ಮಧ್ಯೆ, ಝಿಕಾ ವೈರಸ್ ವರದಿಯಾದ ತಿರುವನಂತಪುರಂನಲ್ಲಿ ತಡೆಗಟ್ಟುವ ಕ್ರಮಗಳನ್ನು ತೀವ್ರಗೊಳಿಸಲು ಕೇಂದ್ರ ತಜ್ಞರ ತಂಡ ಸೂಚಿಸಿದೆ.


 

                  ಶೀಘ್ರದಲ್ಲೇ ಹೆಚ್ಚಿನ ಪರೀಕ್ಷಾ ಕಿಟ್‍ಗಳು ಲಭ್ಯವಾಗುತ್ತವೆ ಎಂದು ನಿನ್ನೆ ಕೇರಳಕ್ಕೆ ಭೇಟಿ ನೀಡಿದ್ದ ತಜ್ಞರ ತಂಡ ತಿಳಿಸಿದೆ. ತಂಡವು ಆರೋಗ್ಯ ನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿತು. ತಜ್ಞರ ತಂಡವು ಪೀಡಿತ ಪ್ರದೇಶಗಳಿಗೂ ಭೇಟಿ ನೀಡಲಿದೆ.

                  ಏತನ್ಮಧ್ಯೆ, ನಂದಂಕೋಟ್ ನಿಂದ ನಿನ್ನೆ  40 ರ ಹರೆಯದ ವ್ಯಕ್ತಿಯೊಬ್ಬರಲ್ಲಿ ಈ ವೈರಸ್ ದೃಢೀಕರಿಸುವುದರೊಂದಿಗೆ ಸೋಂಕಿತರ ಸಂಖ್ಯೆ 15 ಕ್ಕೆ ಏರಿದೆ. ಪುರಸಭೆಯ ಮಿತಿಯಿಂದ ಹೆಚ್ಚಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣಗಳ ಸಂಖ್ಯೆ ಹೆಚ್ಚುವ ಭೀತಿಯ ಕಾರಣ ಆರೋಗ್ಯ ಇಲಾಖೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಎಚ್ಚರಿಕೆ ನೀಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries