HEALTH TIPS

ಪೋಲೀಸರ ತನಿಖೆಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲ: ಇದು ರಾಜಕೀಯ ನಾಟಕ: ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್

              ತ್ರಿಶೂರ್: ಕೊಡಕರ ದರೋಡೆ ಪ್ರಕರಣದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಅವರನ್ನು ನಿನ್ನೆ ಪೋಲೀಸರು ವಿಚಾರಣೆ ನಡೆಸಿ ಹೇಳಿಕೆಗಳನ್ನು ಸಂಗ್ರಹಿಸಿದರು.  ಕೊಡಕರ ಘಟನೆಯೊಂದಿಗೆ ಪಕ್ಷವನ್ನು ಥಳುಕುಹಾಕಲು ಸಾಧ್ಯವಿಲ್ಲ ಎಂದು ಸುರೇಂದ್ರನ್ ಹೇಳಿದರು. ಈ ಪ್ರಕರಣದ ತನಿಖೆಯ ಬಗ್ಗೆ ಪೋಲೀಸರಿಗೆ ಸ್ಪಷ್ಟತೆಗಳಿಲ್ಲ. ಇದು ರಾಜಕೀಯ ನಾಟಕ ಮತ್ತು ಬಿಜೆಪಿಯನ್ನು ಅವಮಾನಿಸುವ ಪ್ರಯತ್ನ ಎಂದು ಸುರೇಂದ್ರನ್ ಹೇಳಿದ್ದಾರೆ.

               ಪೋಲೀಸರಿಗೆ ವಿಚಿತ್ರವಾದ ತನಿಖಾ ವಿಧಾನವಿದೆ ಎಂದು ಸುರೇಂದ್ರನ್ ಪುನರುಚ್ಚರಿಸಿದರು. ಕರೆ ಪಟ್ಟಿಯಲ್ಲಿರುವವರ ಬಗ್ಗೆ ಕೇಳಿದರು. ತಿಳಿದಿರುವ ವಿಷಯಗಳು ಹೇಳಿದೆ. ಘಟನೆಯಲ್ಲಿ ಅಪರಾಧಿಗಳ ಬಗ್ಗೆ ಯಾವುದೇ ತನಿಖೆ ನಡೆಯುತ್ತಿಲ್ಲ. ದೂರುದಾರರಿಗೆ ಸಂಬಂಧಿಸಿರುವ ಮತ್ತು ಪ್ರಕರಣಕ್ಕೆ ಸಂಬಂಧವಿಲ್ಲದವರನ್ನು ಕರೆಯಲಾಗುತ್ತದೆ. ಇದು ರಾಜಕೀಯ ತಂತ್ರ ಎಂದು ಸುರೇಂದ್ರನ್ ಹೇಳಿದರು.

                  ಚಿನ್ನ ಕಳ್ಳಸಾಗಣೆ, ಡಾಲರ್ ಕಳ್ಳಸಾಗಣೆ ಮತ್ತು ಲೈಂಗಿಕ ಕಿರುಕುಳವನ್ನು ಮುಚ್ಚಿಹಾಕುವ ಪ್ರಯತ್ನಗಳು ನಡೆಯುತ್ತಿವೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಈ ಘಟನೆಯನ್ನು ಬಿಜೆಪಿಯೊಂದಿಗೆ ಜೋಡಿಸಲು ಸಾಧ್ಯವಿಲ್ಲ. ಉದ್ದೇಶಪೂರ್ವಕವಾಗಿ ಪಕ್ಷವನ್ನು ಅವಮಾನಿಸಲು ಪ್ರಯತ್ನಿಸಲಾಗುತ್ತಿದೆ. ಇದನ್ನು ರಾಜಕೀಯವಾಗಿ ಮತ್ತು ಕಾನೂನುಬದ್ಧವಾಗಿ ಎದುರಿಸಲಿದ್ದೇನೆ ಎಂದು ಸುರೇಂದ್ರನ್ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries