HEALTH TIPS

ಚಿನ್ನ ಕಳ್ಳಸಾಗಣೆಗೆ ಸಹಾಯ; ಕಣ್ಣೂರು ವಿಮಾನ ನಿಲ್ದಾಣದ ಮೂವರು ಅಧಿಕಾರಿಗಳು ಉದ್ಯೋಗದಿಂದ ವಜಾ

             ಕಣ್ಣೂರು: ವಿಮಾನ ನಿಲ್ದಾಣದ ಮೂಲಕ ಚಿನ್ನ ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಹೊರಹಾಕಲಾಗಿದೆ. ಮೂವರು ಇನ್ಸ್‍ಪೆಕ್ಟರ್‍ಗಳನ್ನು ಕಸ್ಟಮ್ಸ್ ಪ್ರಿವೆಂಟಿವ್ ಕಮಿಷನರ್ ಸುಮಿತ್ ಕುಮಾರ್ ವಜಾ ಮಾಡಿದ್ದಾರೆ. ರೋಹಿತ್ ಶರ್ಮಾ, ಸಕೇಂದ್ರ ಪಾಸ್ವಾನ್ ಮತ್ತು ಕ್ರಿಶನ್ ಕುಮಾರ್ ಅವರನ್ನು ವಜಾ ಮಾಡಲಾಗಿದೆ.

              2019ರ ಆ.18 ರ ಪ್ರಕರಣವೊಂಣದರ ಸಂಬಂಧ ಈ ಕ್ರಮ ಕೈಗೊಳ್ಳಲಾಗಿದೆ. ಆಗಸ್ಟ್ 18 ರಂದು, ವಿಮಾನ ನಿಲ್ದಾಣದ ಮೂಲಕ ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಮೂವರು ವಾಹಕರಿಂದ 4.5 ಕೆಜಿ ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ವಶಪಡಿಸಿಕೊಂಡಿತ್ತು. ನಂತರದ ತನಿಖೆಯಲ್ಲಿ ಅಧಿಕಾರಿಗಳೂ ಭಾಗಿಯಾಗಿರುವುದು ತಿಳಿದುಬಂದಿತು.

                ಆ ಸಂದರ್ಭ ಕೋಝಿಕೋಡ್ ಕಸ್ಟಮ್ಸ್ ನಿಯಂತ್ರಣ ವಿಭಾಗದ ಇನ್ಸ್‍ಪೆಕ್ಟರ್ ಆಗಿದ್ದ ರಾಹುಲ್ ಪಂಡಿತ್ ಅವರ ಸೂಚನೆಯ ಮೇರೆಗೆ ಮೂವರು ಅಧಿಕಾರಿಗಳು ಚಿನ್ನ ಕಳ್ಳಸಾಗಣೆಗೆ ಸಹಕರಿಸಿದ್ದರು. ಅವರ ಸಹಾಯದಿಂದ ವಿಮಾನ ನಿಲ್ದಾಣದ ಮೂಲಕ 11 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

              ಇದರ ಆಧಾರದ ಮೇಲೆ ಡಿಆರ್‍ಐನಿಂದ ಬಂಧಿಸಲ್ಪಟ್ಟ ರಾಹುಲ್ ಪಂಡಿತ್ ಅವರನ್ನು ಈ ಹಿಂದೆ ವಜಾ ಮಾಡಲಾಗಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries