HEALTH TIPS

ಮುನ್ನಾರ್‍ನಲ್ಲಿ ತಿಮಿಂಗಿಲ ವಾಂತಿ ಬೇಟೆ!: ಐವರನ್ನು ಬಂಧಿಸಿದ ಅರಣ್ಯ ಇಲಾಖೆ

          ತೇನಿ: ಮುನ್ನಾರ್ ನಲ್ಲಿ ತಿಮಿಂಗಿಲ ವಾಂತಿ ಸಂಗ್ರಹದಲ್ಲಿ ತೊಡಗಿದ್ದ ಐವರನ್ನು ಅರಣ್ಯ ಇಲಾಖೆ ಬಂಧಿಸಿದೆ. ತೇನಿ ಜಿಲ್ಲೆಯ ಪೆರಿಯಾಕುಳಂನ ವೆಲ್ಮುರುಕನ್ ಮತ್ತು ಸೇತು, ವಟ್ಟಲಗುಂಡ್‍ನ ಮುರುಕನ್ ಮತ್ತು ರವಿಕುಮಾರ್ ಮತ್ತು ಮುನ್ನಾರ್ ಮೂಲದ ಮುನ್ನಿ ಸ್ವಾಮಿ ಅವರನ್ನು ಬಂಧಿಸಲಾಗಿದೆ. ಅವರಿಂದ ಐದು ಕಿಲೋಗ್ರಾಂಗಳಷ್ಟು ಅಂಬಗ್ರ್ರಿಸ್ ಅನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ.

                      ಮುನ್ನಾರ್‍ನ ಲಾಡ್ಜ್‍ನಲ್ಲಿ  ಅಂಬಗ್ರ್ರಿಸ್    ಹಸ್ತಾಂತರಿಸಲು ಯತ್ನಿಸುತ್ತಿದ್ದಾಗ ಅವರನ್ನು ಅರಣ್ಯ ಇಲಾಖೆ ವಶಕ್ಕೆ ತೆಗೆದುಕೊಂಡಿದೆ. ಗುಂಪನ್ನು ವಿವರವಾಗಿ ಪ್ರಶ್ನಿಸಲಾಗುತ್ತಿದೆ. ಅಂಬಗ್ರ್ರಿಸ್ ಎಲ್ಲಿಂದ ಸಂಗ್ರಹಿಸಲಾಯಿತು  ಎಂದು ವಿಚಾರಣೆಗಳು ಪ್ರಗತಿಯಲ್ಲಿದೆ. ಕಳೆದ ವಾರ ಅರಣ್ಯ ಇಲಾಖೆ ಕೇರಳದಿಂದ 30 ಕೋಟಿ ರೂ. ಮೌಲ್ಯದ ಅಂಬಗ್ರ್ರಿಸ್ ನ್ನು ಮೂವರಿಂದ  ವಶಪಡಿಸಿಕೊಂಡಿತ್ತು.

                ತಿಮಿಂಗಿಲದ ವಾಂತಿಯನ್ನು ಅಂಬಗ್ರ್ರಿಸ್ ಎಂದು ಕರೆಯುತ್ತಾರೆ. ಅವು ಘನ ಮೇಣದಂತೆ ಕಾಣುತ್ತವೆ. ಇದು ತಿಮಿಂಗಿಲಗಳ ಹೊಟ್ಟೆಯಲ್ಲಿನ ಜೀರ್ಣಕಾರಿ ಸಾಧನಗಳಿಂದ ಸ್ರವಿಸುವ ವಸ್ತುವಾಗಿದೆ. ಅಳಿವಿನಂಚಿನಲ್ಲಿರುವ ಪ್ರಭೇದವಾಗಿರುವುದರಿಂದ ಭಾರತದಲ್ಲಿ ಅಂಬಗ್ರ್ರಿಸ್ ಮಾರಾಟವನ್ನು ನಿಷೇಧಿಸಲಾಗಿದೆ. ಖರೀದಿಸುವುದು ಮತ್ತು ಮಾರಾಟ ಮಾಡುವುದು ಅಪರಾಧವಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries