HEALTH TIPS

ಓಬಿಸಿ ಮೋರ್ಚಾ ಮಂಜೇಶ್ವರ ಮಂಡಲ ಸಮಿತಿಯಿಂದ ಮಂಗಲ್ಪಾಡಿ ಆಸ್ಪತ್ರೆ ಮುಂದೆ ಪ್ರತಿಭಟನೆ

                ಉಪ್ಪಳ: ಕೊರೋನಾ ಮಹಾಮಾರಿ ತಡೆಗಟ್ಟಲು ಕೇಂದ್ರ ಸರ್ಕಾರ ಉಚಿತವಾಗಿ  ನೀಡುತ್ತಿರುವ ವ್ಯಾಕ್ಸಿನ್ ವನ್ನು ಕೇರಳ ಸರ್ಕಾರ ಅಸಮರ್ಪಕವಾಗಿ ವಿತರಿಸುವುದನ್ನು ವಿರೋಧಿಸಿ  ಓ ಬಿ ಸಿ ಮೋರ್ಚಾ ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ಮಂಜೇಶ್ವರ ತಾಲೂಕು ಆಸ್ಪತ್ರೆ ಮಂಗಲ್ಪಾಡಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಯಿತು.

            ಕಾರ್ಯಕ್ರಮವನ್ನು ಒಬಿಸಿ ಮೋರ್ಛಾ ರಾಜ್ಯ ಕೋಶಾಧಿಕಾರಿ ನ್ಯಾಯವಾದಿ.ನವೀನ್ ರಾಜ್ ಉದ್ಘಾಟಿಸಿದರು. ಓ ಬಿ ಸಿ ಮೋರ್ಚಾ ಮಂಜೇಶ್ವರ ಮಂಡಲ ಅಧ್ಯಕ್ಷ ಚಂದ್ರಹಾಸ ಕಡಂಬಾರ್ ಅಧ್ಯಕ್ಷ ತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಬಾಬು ಕುಬಣೂರು, ಬಿಜೆಪಿ ಮಂಗಲ್ಪಾಡಿ ಪಂಚಾಯತಿ ಸಮಿತಿ ಅಧ್ಯಕ್ಷ ವಸಂತ್ ಕುಮಾರ್  ಮಯ್ಯ, ಯುವಮೋರ್ಛಾ ಮಂಡಲ ಅಧ್ಯಕ್ಷ ಚಂದ್ರಕಾಂತ್ ಶೆಟ್ಟಿ,   ಓ ಬಿ ಸಿ ಮೋರ್ಛಾ ಮಂಡಲ ಕಾರ್ಯದರ್ಶಿ ಚಂದ್ರಹಾಸ ವಳಚ್ಚಿಲ್, ಓ ಬಿ ಸಿ ಮೋರ್ಛಾ ಪಂಚಾಯತಿ ಅಧ್ಯಕ್ಷ ಜಯರಾಜ್ ಬಂದ್ಯೋಡ್, ಪಂಚಾಯತಿ ಸದಸ್ಯ ಕಿಶೋರ್ ಕುಮಾರ್ , ಸತ್ಯ ವೀರನಗರ, ರಂಜಿತ್ ಕೋಡಿಬೈಲ್ ಉಪಸ್ಥಿತರಿದ್ದರು. ಧನರಾಜ್ ಪ್ರತಾಪನಗರ ಸ್ವಾಗತಿಸಿ, ಕಿಶೋರ್ ಭಗವತಿ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries