HEALTH TIPS

ಲಾಕ್ ಡೌನ್ ರಿಯಾಯಿತಿಗಳನ್ನು ಘೋಷಿಸಿದರೂ ಹೋಟೆಲ್ ವಲಯವನ್ನು ನಿರ್ಲಕ್ಷಿಸಲಾಗಿದೆ; ಕೇರಳ ಹೋಟೆಲ್‍ಗಳು ಮತ್ತು ರೆಸ್ಟೋರೆಂಟ್ ಅಸೋಸಿಯೇಶನ್

                             

                ತೊಡುಪುಳ: ಕೇರಳದ ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳಿಗೂ ಲಾಕ್ಡೌನ್ ವಿನಾಯ್ತಿಗಳಲ್ಲಿ ಮಹತ್ವ ನೀಡಬೇಕು. ಕುಳಿತು ಆಹಾರ ಸೇವಿಸಲು ಅನುವುಮಾಡಿಕೊಡಬೇಕೆಂದು ಕೇರಳ ಹೋಟೆಲ್ ಆಂಡ್  ರೆಸ್ಟೋರೆಂಟ್ ಅಸೋಸಿಯೇಶನ್ ಸಚಿವ ರೋಶಿ ಅಗಸ್ಟೀನ್ ಮತ್ತು ಶಾಸಕ ಪಿ.ಜೆ. ಜೋಸೆಫ್, ಎಂ.ಎಂ.ಮಣಿ ಅವರಿಗೆ ಮನವಿ ನೀಡಿ ಒತ್ತಾಯಿಸಿದೆ.

                   ರಾಜ್ಯದಲ್ಲಿ ಕಡಿಮೆ ಕೋವಿಡ್ ವಿಸ್ತರಣೆ ಮತ್ತು ಟಿಪಿಆರ್ ಹಿನ್ನೆಲೆಯಲ್ಲಿ ಲಾಕ್ ಡೌನ್ ರಿಯಾಯಿತಿಗಳನ್ನು ಘೋಷಿಸಿದಾಗಲೂ ಹೋಟೆಲ್ ವಲಯವನ್ನು ನಿರ್ಲಕ್ಷಿಸಲಾಗಿದೆ ಎಂದು ಸಂಘ ಆರೋಪಿಸಿದೆ. ಪ್ರಸ್ತುತ ರಾಜ್ಯದ ಹೆಚ್ಚಿನ ಹೋಟೆಲ್‍ಗಳು ಮತ್ತು ರೆಸ್ಟೋರೆಂಟ್‍ಗಳನ್ನು ಮುಚ್ಚಲಾಗಿದೆ.

              ಲಾಕ್‍ಡೌನ್ ಅವಧಿಯಲ್ಲಿ ಪಾರ್ಸೆಲ್‍ಗಳಿಗಾಗಿ ತೆರೆದಿದ್ದ ಹೋಟೆಲ್‍ಗಳನ್ನು ಮುಚ್ಚಬೇಕಾಗಿತ್ತು ಏಕೆಂದರೆ ನಷ್ಟವನ್ನು ಭರಿಸಲು ಅಸಾಧ್ಯವಾಗಿತ್ತು. ಹೋಟೆಲ್ ಕಾರ್ಮಿಕರು ಜೀವನೋಪಾಯಗಳಿಲ್ಲದೆ ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ಸಂಘ ಹೇಳಿದೆ.

                 ಶೇಕಡಾ 16 ಕ್ಕಿಂತ ಕಡಿಮೆ ಟಿಪಿಆರ್ ಹೊಂದಿರುವ ಪ್ರದೇಶಗಳಲ್ಲಿನ ಹೋಟೆಲ್‍ಗಳಿಗೆ ವರ್ಕ್ ಪರ್ಮಿಟ್ ನೀಡಬೇಕು ಮತ್ತು ಪ್ರಸ್ತುತ ಕೆಲಸದ ಪರವಾನಗಿಯನ್ನು ಕನಿಷ್ಠ ರಾತ್ರಿ 9.30 ವರೆಗೆ ವಿಸ್ತರಿಸಬೇಕು ಎಂದು ಸಂಘ ಒತ್ತಾಯಿಸಿದೆ.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries