HEALTH TIPS

ಚಿನ್ನ ಕಳ್ಳಸಾಗಣೆ ಪ್ರಕರಣ: ಪ್ರಕರಣವನ್ನು ರದ್ದುಗೊಳಿಸಲು ಸ್ವಪ್ನಾ ಸುರೇಶ್ ಮನವಿ

                ಕೊಚ್ಚಿ: ಯುಎಪಿಎ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸ್ವಪ್ನಾ ಸುರೇಶ್ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ರಾಜತಾಂತ್ರಿಕ ಚಾನೆಲ್ ಮೂಲಕ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಐ.ಎ ದಾಖಲಿಸಿದ ಪ್ರಕರಣದಲ್ಲಿ ಜಾಮೀನು ಕೋರಲಾಗಿದೆ. ವಿಚಾರಣೆ ಅನಿರ್ದಿಷ್ಟವಾಗಿ ನಡೆಯುತ್ತಿದೆ ಎಂದು ಸಪ್ನಾ ದೂರಿದ್ದಾರೆ.

               ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಎನ್‍ಐಎ ವಿರುದ್ದ ಸ್ವಪ್ನಾ ಹೈಕೋರ್ಟ್‍ನ್ನು ಸಂಪರ್ಕಿಸಿದ್ದರು. ಕಳೆದ ವರ್ಷ ಜುಲೈ 5 ರಂದು ಯುಎಇ ದೂತಾವಾಸಕ್ಕೆ ರಾಜತಾಂತ್ರಿಕ ಮಾರ್ಗದ ಮೂಲಕ ತಲುಪಿದ್ದ 30 ಕೆಜಿ ಚಿನ್ನವನ್ನು ಕಸ್ಟಮ್ಸ್ ವಶಪಡಿಸಿಕೊಂಡಿತ್ತು.

                  ಈ ಪ್ರಕರಣದಲ್ಲಿ ಮೊದಲು ಬಂಧಿಸಲ್ಪಟ್ಟವರು ಕಾನ್ಸುಲೇಟ್‍ನ ಪೆÇ್ರ ಆಗಿದ್ದ ಸರಿತ್. ಸರಿತ್ ಅವರ ಹೇಳಿಕೆಯ ಆಧಾರದ ಮೇಲೆ, ಸ್ವಪ್ನಾ ಮತ್ತು ಸಂದೀಪ್ ಅವರ ತನಿಖೆ ಮುಂದುವರೆದಿದೆ ಮತ್ತು ಜುಲೈ 12 ರಂದು ಎನ್.ಐ.ಎ ಅವರನ್ನು ಬಂಧಿಸಿತ್ತು. ಎನ್‍ಐಎ ದಾಖಲಿಸಿರುವ ಪ್ರಕರಣದಲ್ಲಿ 35 ಆರೋಪಿಗಳಿದ್ದಾರೆ. ಇಬ್ಬರು ಪರಾರಿಯಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries