ಕೋಝಿಕ್ಕೋಡ್: ಕೋಝಿಕೋಡ್ನ ಮೂವರು ವ್ಯಾಪಾರಿಗಳಿಗೆ ಕಮ್ಯುನಿಸ್ಟ್ ಭಯೋತ್ಪಾದಕರ ಹೆಸರಿನಲ್ಲಿ ಬೆದರಿಕೆ ಪತ್ರಗಳು ಬಂದಿರುವುದಾಗಿ ತಿಳಿದುಬಂದಿದೆ. ಘಟನೆಯ ಕುರಿತು ಪೋಲೀಸರು ವ್ಯಾಪಕ ತನಿಖೆ ನಡೆಸುತ್ತಿದ್ದಾರೆ. ವ್ಯಾಪಾರಿಗಳಿಗೆ ಭಯೋತ್ಪಾದಕರಿಂದ ತಲಾ 3 ಕೋಟಿ ರೂ.ಗಳ ಬೇಡಿಕೆ ಬಂದಿದ್ದು, ಹಣ ನೀಡದಿದ್ದರೆ ಕುಟುಂಬ ಸದಸ್ಯರನ್ನು ವಧಿಸುವುದಾಗಿ ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ.
ತನಿಖೆಗೆ ಕ್ರೈಂ ಬ್ರಾಂಚ್ ಡಿವೈಎಸ್ಪಿ ಟಿಪಿ ಶ್ರೀಜಿತ್ ನೇತೃತ್ವ ವಹಿಸುತ್ತಿದ್ದಾರೆ. ಮಲಪ್ಪುರಂನ ಹೌಸಿಂಗ್ ಕಾಲೋನಿಯಲ್ಲಿರುವ ಶಂಕಿತರ ಕಚೇರಿಯಲ್ಲಿ ಪೋಲೀಸರು ತಪಾಸಣೆ ನಡೆಸಿದರು. ಪತ್ರವನ್ನು ಸ್ಪೀಡ್ ಪೋಸ್ಟ್ ಮೂಲಕ ಸ್ವೀಕರಿಸಲಾಗಿದೆ. ಅಂಚೆ ಕಚೇರಿಯಲ್ಲಿ ನೀಡಲ್ಪಟ್ಟ ತನಿಖೆಯ ವೇಳೆ ಪೋಲೀಸರು ಆರೋಪಿಗಳನ್ನು ಗುರುತಿಸಿದ್ದಾರೆ.
ಘಟನೆಯ ಬಗ್ಗೆ ಮೆಡಿ. ಕಾಲೇಜು ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಪತ್ರವನ್ನು ವಯನಾಡ್ ಚುಂಡಾ ಎಂಬಲ್ಲಿಂದ ಕಳುಹಿಸಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಈ ಕುಕೃತ್ಯದ ಹಿಂದೆ ಇರುವರೆಂದು ಶಂಕಿಸಲಾಗುವ ಇಬ್ಬರು ವ್ಯಕ್ತಿಗಳನ್ನು ಪೋಲೀಸರು ಗುರುತಿಸಿದ್ದಾರೆ. ಅವರು ಪರಾರಿಯಾಗಿದ್ದಾರೆ ಮತ್ತು ತನಿಖೆ ನಡೆಯುತ್ತಿದೆ ಎಂದು ಪೋಲೀಸರು ತಿಳಿಸಿದ್ದಾರೆ.