ಕಾಸರಗೋಡು: ಎಡನೀರು ಶ್ರೀ ಮಠದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಧ್ವಜಸ್ತಂಭದ ಲೋಕಾರ್ಪಣೆ ನಾಳೆ ನಡೆಯಲಿದೆ. ಧ್ವಜಸ್ತಂಭದ ಉದ್ಘಾಟನೆಯನ್ನು ಭಾರತೀಯ ಸೇನೆಯ ನಿವೃತ್ತ ಕಮಾಂಡೋ ಶ್ಯಾಮರಾಜ್ (ಭಾರತೀಯ ಪ್ಯಾರಚೂಟ್ ರೆಜಿಮೆಂಟ್ ) ಉದ್ಘಾಟಿಸುವರು. ಎಪ್ಪತ್ತೈದನೆಯ ಸ್ವಾತಂತ್ರ್ಯ ದಿನದ ಧ್ವಜಾರೋಹಣವನ್ನು ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರು ನೆರವೇರಿಸುವರು .ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತಿ ಭಾರತಿ ಸ್ವಾಮಿಜಿಯವರ ಪುಣ್ಯ ಸ್ಮರಣೆಗಾಗಿ ಈ ಧ್ವಜಸ್ತಂಭವನ್ನು ವೆಂಕಟ್ ಭಟ್ ಎಡನೀರು ಸೇವಾ ರೂಪದಲ್ಲಿ ನೀಡಿರುತ್ತಾರೆ.





