HEALTH TIPS

ಸೋಂಕು ಹರಡುವಿಕೆಯನ್ನು ಎದುರಿಸಲು ಸರ್ಕಾರದಿಂದ ಮೂರು ದಿನಗಳ ಬಿರುಸಿನ ವ್ಯಾಕ್ಸಿನೇಶನ್ ಅಭಿಯಾನ: ಲಸಿಕೆ ಪ್ರಮಾಣವನ್ನು ಪೂರ್ಣಗೊಳಿಸಲು ಜಿಲ್ಲೆಗಳಿಗೆ ನಿರ್ದೇಶನ

                 ತಿರುವನಂತಪುರಂ: ಕಂಟೈನ್‍ಮೆಂಟ್ ವಲಯಗಳಲ್ಲಿ ಕೊರೊನಾ ಇಲ್ಲದ ಎಲ್ಲ ರೋಗಿಗಳಿಗೆ ಲಸಿಕೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕಂಟೈನ್ಮೆಂಟ್  ವಲಯದಲ್ಲಿ ಪ್ರತಿಯೊಬ್ಬರನ್ನು ಪರೀಕ್ಷಿಸಲಾಗುವುದು ಮತ್ತು ಸೋಂಕಿಲ್ಲದವರಿಗೆ ಆದ್ಯತೆ ನೀಡಲಾಗುತ್ತದೆ ಮತ್ತು ಲಸಿಕೆ ಹಾಕಲಾಗುವುದು ಎಂದು ಪಿಣರಾಯಿ ವಿಜಯನ್ ತಿಳಿಸಿರುವರು. 

                   ಸರಿಯಾದ ವ್ಯಾಕ್ಸಿನೇಷನ್ ಅಭಿಯಾನವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಜಿಲ್ಲೆಗಳು ಶ್ರದ್ಧೆಯಿಂದ ಕೆಲಸ ಮಾಡಬೇಕು. ಜಿಲ್ಲೆಗಳಿಗೆ ನಿಗದಿಪಡಿಸಿದ ಲಸಿಕೆ ಪ್ರಮಾಣವನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. 10 ಜಿಲ್ಲೆಗಳಲ್ಲಿ  ದಿನಕ್ಕೆ 40,000 ಜನರಿಗೆ ಮತ್ತು ಉಳಿದ ನಾಲ್ಕು ಜಿಲ್ಲೆಗಳಲ್ಲಿ 25,000 ಜನರಿಗೆ ಲಸಿಕೆ ನೀಡಲಾಗುತ್ತದೆ.

                 ಇಂದು, ನಾಳೆ ಹಾಗೂ ಸೋಮವಾರ  ರಾಜ್ಯದಲ್ಲಿ ಲಸಿಕೆ ಅಭಿಯಾನ ಸಮರೋಪಾದಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಿಗೆ ಪೂರ್ವಾನುಮತಿ ಪಡೆಯಬೇಕು. ಆನ್‍ಲೈನ್ ತರಗತಿಗಳು, ಪರೀಕ್ಷೆಗಳು ಮತ್ತು ಪ್ಲಸ್ ಒನ್ ಪ್ರವೇಶ ಪ್ರಕ್ರಿಯೆ  ಪ್ರಾರಂಭಿಸಬೇಕಾಗಿರುವುದರಿಂದ ಶಿಕ್ಷಕರಿಗೆ ಕೊರೋನಾ ಕರ್ತವ್ಯದಿಂದ ವಿನಾಯಿತಿ ನೀಡಲಾಗುತ್ತದೆ. ಸರ್ಕಾರವು ಓಣಂ ದಿನದಂದು ಪುಷ್ಪಾರ್ಚನೆ(ಮನೆಗಲಲ್ಲಿ ಮಾತ್ರ ಪೂಕಳ) ಮಾಡುವುದನ್ನು ಹೊರತುಪಡಿಸಿ ಇತರ ಆಚರಣೆಗಳನ್ನು ನಿಯಂತ್ರಿಸಬೇಕು ಎಂದು ಸಿಎಂ ಸೂಚಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries