HEALTH TIPS

ಎಲ್ಲಾ ಅಂಗಡಿಗಳನ್ನು ತೆರೆಯಲು ಅನುಮತಿ ಸಾಧ್ಯತೆ: ಕೊರೋನಾ ನಿಬಂಧನೆಗಳಲ್ಲಿ ಹೊಸ ಮಾನದಂಡ ಪ್ರಕಟಿಸಲು ರಾಜ್ಯ ಸರ್ಕಾರದಿಂದ ಸಿದ್ಧತೆ?

                                           

            ತಿರುವನಂತಪುರ: ಕೊರೋನಾ ನಿರ್ಬಂಧಗಳನ್ನು ಬದಲಾಯಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದೆ. ವಾರಾಂತ್ಯದ ಲಾಕ್‍ಡೌನ್ ಮತ್ತು ಪಂಚಾಯತಿ ಕೇಂದ್ರಿತ ಮುಚ್ಚುವಿಕೆಗಳನ್ನು ಹಿಂಪಡೆಯುವ ಸಾಧ್ಯತೆಗಳಿವೆ. ಕೇಂದ್ರದಿಂದ ಅವಲೋಕನಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ಸಮಿತಿಯ ವರದಿಯನ್ನು ಆಧರಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿದುಬಂದಿದೆ.

                   ನಿರಂತರ ಲಾಕ್ ಡೌನ್ ಹೊರತಾಗಿಯೂ, ಕೊರೊನಾ ರೋಗಿಗಳ ಸಂಖ್ಯೆ ಅಥವಾ ಟಿಪಿಆರ್ ಮಟ್ಟ ಕೇರಳದಲ್ಲಿ ಮಾತ್ರ ಕಡಿಮೆಯಾಗುತ್ತಿಲ್ಲ. ಇತರ ರಾಜ್ಯಗಳಲ್ಲಿ, ರಿಯಾಯಿತಿಗಳನ್ನು ನೀಡಿಯೂ ಸೋಂಕು ಹರಡುವಿಕೆ ನಿಯಂತ್ರಣಕ್ಕೊಳಗಾಗಿದೆ. ಇದರಿಂದ ಕೇರಳದಲ್ಲೂ ನಿಯಂತ್ರಣಗಳಲ್ಲಿ ಕೆಲವು ಬದಲಾವಣೆಗಳನ್ನು ಕಾರಣವಾಗಲಿದೆ. ವಾರಾಂತ್ಯದ ಲಾಕ್‍ಡೌನ್‍ಗಳನ್ನು ಹಿಂಪಡೆಯಲು ಮತ್ತು ಮಧ್ಯಂತರ ಅಂಗಡಿ ತೆರೆಯುವಿಕೆಗಳ ನಿಯಂತ್ರಣಗಳನ್ನು ಬದಲಿಸಿ ಪೂರ್ಣ ಸಮಯ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುವ ಚಿಂತನೆಗಳಿವೆ. ಪಂಚಾಯತ್ ಆಧಾರಿತ ನಿಯಂತ್ರಣಗಳನ್ನು ಹಿಂಪಡೆದು ಸೋಂಕು ವರದಿಯಾದ ವಾರ್ಡ್‍ಗಳಲ್ಲಿ ಮಾತ್ರ ಲಾಕ್‍ಡೌನ್ ವಿಧಿಸಲಾಗುತ್ತದೆ.

                 ವ್ಯಾಪಕ ಪರೀಕ್ಷೆಯೊಂದಿಗೆ ರೋಗಿಯ ಸಂಪರ್ಕ ಪಟ್ಟಿಯನ್ನು ಮರು-ಕ್ರಮೀಕರಿಸಲಾಗುವುದು. ಮಂಗಳವಾರ ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಇದಕ್ಕೂ ಮುನ್ನ, ಕೇಂದ್ರ ಆರೋಗ್ಯ ಸಚಿವಾಲಯ ನೇಮಿಸಿದ ಕೇಂದ್ರ ತಂಡದ ವರದಿಯನ್ನೂ ಪರಿಶೀಲಿಸಲಾಗುವುದು. ಲಾಕ್ ಡೌನ್ ಹಾಗೂ ಮಧ್ಯಂತರ ನಿಯಂತ್ರಣಗಳ ವಿರುದ್ಧ ಪ್ರತಿಭಟನೆಗಳು ಮತ್ತು ಓಣಂ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಬೆಳಿಗ್ಗೆ 9 ಗಂಟೆಯಿಂದ ಅಂಗಡಿಗಳನ್ನು ಎಲ್ಲಾ ದಿನಗಳಲ್ಲೂ ಪೂರ್ಣ ಪ್ರಮಾಣದಲ್ಲಿ ತೆರೆಯುವುದಾಗಿ ನೀಡಿರುವ ಎಚ್ಚರಿಕೆಗಳ ಕಾರಣ ಸರ್ಕಾರ ಈ ರೀತಿಯ ಹೊಸ ಚಿಂತನೆಗಳನ್ನು ಮುಂದಿಡುತ್ತಿದೆ ಎನ್ನಲಾಗಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries