HEALTH TIPS

ಕೇರಳದಲ್ಲಿ ಯಾವುದೇ ಉದ್ಯಮ ಬಾರದಂತೆ ಲಾಬಿ ಇದೆ: ಸಚಿವ ಪಿ ರಾಜೀವ್

                                                       

         ತಿರುವನಂತಪುರಂ: ಕೇರಳದಲ್ಲಿ ಕೈಗಾರಿಕೆ ಬಾರದಂತೆ ತಡೆಯುವ  ಲಾಬಿ ಇದೆ ಎಂದು ಕೈಗಾರಿಕಾ ಸಚಿವ ಪಿ ರಾಜೀವ್ ಹೇಳಿದರು. ಹಳತಾದ ಕಾನೂನುಗಳನ್ನು ಬದಲಿಸುವ ವಿಚಾರದಲ್ಲಿ ಸದನದಲ್ಲಿ ಚರ್ಚಿಸಿದ ವಿಷಯಗಳು ತಪ್ಪಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿವೆ ಎಂದು ಅವರು ಹೇಳಿದರು.

                  ಬೃಹತ್ ಲಾಬಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಇಂತಹ ಅಭಿಯಾನಗಳೇ ಸಾಕ್ಷಿ ಎಂದು ಸಚಿವರು ವಿಧಾನಸಭೆಗೆ ತಿಳಿಸಿದರು. ಸದನದಲ್ಲಿ ಹೇಳಿದ್ದರಲ್ಲಿ ಒಂದು ಭಾಗವನ್ನು ತೆಗೆದುಕೊಂಡು ಅದನ್ನು ತಪ್ಪಾಗಿ ಅರ್ಥೈಸುವರು.  ಇದು ವಿಧಾನಸಭೆಯ ಹಕ್ಕುಗಳ ಮೇಲಿನ ಅತಿಕ್ರಮಣವಾಗಿದೆ. ಕೈಗಾರಿಕಾ ಸಂಸ್ಥೆಗಳಲ್ಲಿ ತಪಾಸಣೆಯನ್ನು ಕ್ರೋಢೀಕರಿಸಲಾಗಿದೆ.

                    ಮೊದಲ ಹಂತದಲ್ಲಿ, ಐದು ವಿಭಾಗಗಳನ್ನು ಪರೀಕ್ಷಿಸಲಾಗುವುದು. ಪರೀಕ್ಷೆಗಳಲ್ಲಿ ವೈಯಕ್ತಿಕ ಹಿತಾಸಕ್ತಿ ಇರದಂತೆ ನೋಡಿಕೊಳ್ಳುವುದಾಗಿ ಸಚಿವರು ಸ್ಪಷ್ಟಪಡಿಸಿದರು. ರಾಜ್ಯ ಸರ್ಕಾರದ ಕೈಗಾರಿಕಾ ವಿರೋಧಿ ಧೋರಣೆಯನ್ನು ಅನುಸರಿಸಿ ಕೈಟೆಕ್ಸ್ ತನ್ನ ಹೂಡಿಕೆಯನ್ನು ತೆಲಂಗಾಣಕ್ಕೆ ವರ್ಗಾಯಿಸಿತ್ತು. ಇದರ ನಂತರ ರಾಜ್ಯದ ಹೂಡಿಕೆಯ ಪರಿಸ್ಥಿತಿಗಳು ಮತ್ತು ನಿಯಮಾವಳಿಗಳ ಬಗ್ಗೆ ತೀವ್ರ ಟೀಕೆಗಳು ಬಂದವು. ಆ ಬಳಿಕ, ಲಾಬಿಯೊಂದು ಕೇರಳದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ತಿಳಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries