ಗಡಿನಾಡಿನ ತುಳು ಕನ್ನಡ ಅಸ್ಮಿತೆಯ ನೂರಾರು ಸಾಧಕರ ಯಶೋಗಾಥೆಗಳು ನಿಜವಾಗಿಯೂ ರೋಚಕ ಮತ್ತು ಪ್ರೇರಕ. ಕೆಲವು ವ್ಯಕ್ತಿಗಳು ಒಂದೋ,ಎರಡೋ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಪ್ರವೃತ್ತರಾಗಿದ್ದರೆ ಮತ್ತೆ ಹಲವರು ಬಹುಮುಖಗಳೊಂದಿಹೆ ಸದಾ ಕ್ರಿಯಾಶೀಲರಾಗಿದ್ದು ಅಚ್ಚರಿ ಮೂಡಿಸುತ್ತಾರೆ.
ಪುತ್ತಿಗೆ ಬಾಡೂರಿನ ಎಂ. ಶಂಕರ ರ್ಯೆ ಮಾಸ್ತರರು ಬಹುಮುಖ ಚತುರತೆಯ ವ್ಯೆಕ್ತಿತ್ವದವರು. ಶಿಕ್ಷಕರಾಗಿದ್ದು ನಿವೃತ್ತರಾಗಿರುವ ಮಾಸ್ತರರು ಹವ್ಯಾಸಿ ಯಕ್ಷಗಾನ ಕಲಾವಿದ, ಧಾರ್ಮಿಕ,ಸಾಂಸ್ಕ್ರತಿಕ ನಾಯಕ. ಅದಕ್ಕಿಂತ ಹೆಚ್ಚು ಓರ್ವ ದೃಢ ರಾಜಕೀಯ ನೇತಾರ ಕೂಡ. ಸದಾ ನಗುಮೊಗದ ಶಂಕರ ಮಾಸ್ತರ್ ಗಂಭೀರ ಹಾಸ್ಯಗಳ ಮಾತುಗಾರಿಕೆಯ ಚತುರ. ಸಾಮಾಜಿಕವಾಗಿ ತೊಡಗಿಸಿಕೊಂಡಿರುವ ಎಂ.ಶAಕರ ರ್ಯೆ ಮಾಸ್ತರ್ ಅವರು ಇಂದು ಸಮರಸ ಸುದ್ದಿಯ ಅತಿಥಿಗಳಾಗಿ ಬದುಕು ಸಾಗಿಬಂದ ಹಾದಿಯ ನೋವು ನಲಿವುಗಳನ್ನು ಸಂವಾದದಲ್ಲಿ ತೆರೆದಿಟ್ಟಿದ್ದಾರೆ.
ವೀಕ್ಷಿಸಿ...ಸಮರಸ ಸುದ್ದಿಯನ್ನು ಪ್ರೋತ್ಸಾಹಿಸಿ.ಸಲಹೆ ಸೂಚನೆಗಳಿಗೆ ಮುಕ್ತ ಸ್ವಾಗತ.
ಸಮರಸ ಸಂವಾದ: ಬಹುಮುಖ ಆಯಾಮದ ರಾಜಕೀಯ ಮತ್ಸದ್ದಿ: ಅತಿಥಿ: ಎಂ.ಶಂಕರ ರೈ ಮಾಸ್ತರ್
0
September 09, 2021
Tags