ಕಾಸರಗೋಡು: ಅಬಕಾರಿ ಇಲಾಖೆಯು ಸಿಬ್ಬಂದಿಯ ನೀತಿಸಂಹಿತೆ ಬಿಗಿಗೊಳಿಸಿದೆ. ಲೈಸೆನ್ಸಿಗಳಿಂದ ದೇಣಿಗೆ ಸ್ವೀಕರಿಸಕೂಡದು ಎಂಬ ಆದೇಶ ಜಾರಿಗೊಳಿಸಲಾಗಿದೆ.
ಸ್ಥಳೀಯಾಡಳಿತ, ಅಬಕಾರಿ ಸಚಿವ ಎಂ.ವಿ.ಗೋವಿಂದನ್ ಮಾಸ್ಟರ್ ಅವರ ಆದೇಶ ಪ್ರಕಾರ ಅಬಕಾರಿ ಕಮೀಷನರ್ ಅವರ ಕಾರ್ಯಾಲಯವು ಕಾನೂನು ಉಲ್ಲಮಘಿಸುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆದೇಶ ಪ್ರಕಟಿಸಿದೆ.
ಇಲಾಖೆಯ ಕೆಲವು ಸಿಬ್ಬಂದಿ ಲೈಸೆನ್ಸಿಗಳಿಂದ ಹಣ ಯಾ ಇನ್ನಿತರ ಕೊಡುಗೆಗಗಳ ರೂಪಗಳಲ್ಲಿ ದೇಣಿಗೆ ಪಡೆಯುತ್ತಿರುವುದಾಗಿ ಆರೋಪಗಳಿದ್ದು, ಈ ಸಂಬಂಧ ಆದೇಶ ಹೊರಡಿಸಲಾಗಿದೆ.

