HEALTH TIPS

ಕಾಡಾನೆಗಳನ್ನು ಒಳಾಂತರ ಅರಣ್ಯಗಳಿಗೆ ಮರಳಿಸುವ ನಿಟ್ಟಿನಲ್ಲಿ ಪುನರಾರಂಭಗೊಳ್ಳಲಿದೆ "ಆಪರೇಷನ್ ಗಜ"

       

                    ಕಾಸರಗೋಡು: ಅರಣ್ಯ ಗಡಿಯ ಜನವಾಸ ಪ್ರದೇಶಗಳಲ್ಲಿ ಕಾಡಾನೆಗಳ ಉಪಟಳ ಅಧಿಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ "ಆಪರೇಷನ್ ಗಜ' ಯೋಜನೆಯನ್ನು ಪುನರಾರಂಭಿಸಲು ನಿರ್ಧರಿಸಲಾಗಿದೆ. 

                              ಇಲ್ಲಿ ಕಾಡಾನೆಗಳು ನಡೆಸುತ್ತಿರುವ ನಾಶನಷ್ಟಗಳ ಹಿನ್ನೆಲೆಯಲ್ಲಿ, ಅವುಗಳನ್ನು ಮರಳಿ ಒಳಾಂತರ ಅರಣ್ಯಗಳಿಗೆ ಮರಳಿಸುವ ನಿಟ್ಟಿನಲ್ಲಿ ಈ ಯೋಜನೆ ಪುನರಾರಂಭಗೊಳಿಸಲಾಗುವುದು. 

                ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ನಡೆಸಿರುವ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕಾಸರಗೋಡಿನಲ್ಲಿ ಈ ಹಿಂದೆ ನಡೆದಿದ್ದ ಸಚಿವ ಮಟ್ಟದ ಸಭೆಯ ತೀರ್ಮಾನದಂತೆ ಈ ಸಭೆ ಜರುಗಿದೆ. 

             ಅಕ್ರಮ ಬೇಟೆ, ಗಾಂಜಾ ಬೆಳೆ, ಅಕ್ರಮ ಸಾರಾಯಿ ನಿರ್ಮಾಣ ಇತ್ಯಾದಿ ಮಾಹಿತಿಗಳನ್ನು ಪರಸ್ಪರ ಹಸ್ತಾಂತರಿಸಿ ಕ್ರಮಗಳನ್ನು ಕೈಗೊಳ್ಳಲೂ ಸಭೆ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಜಂಟಿ ಕಾರ್ಯಾಚಾರಣೆಯನ್ನೂ ನಡೆಸಲಾಗುವುದು ಎಂದು ತೀರ್ಮಾನಿಸಲಾಗಿದೆ. 

              ಸಭೆಯಲ್ಲಿ ಸಿ.ಸಿ.ಎಫ್.ಡಿ.ಕೆ.ವಿನೋದ್ ಕುಮಾರ್, ಮಂಗಳೂರು ಡಿ.ಸಿ.ಎಫ್.ವಿ.ಕೆ.ದಿನೇಶ್ ಕುಮಾರ್, ಕಾಸರಗೋಡು ಡಿ.ಎಫ್.ಒ.ಪಿ.ಧನೇಶ್ ಕುಮಾರ್, ಎ.ಸಿ.ಎಫ್.ಅಜಿತ್ ಕೆ.ರಾಮನ್, ಉಭಯ ರಾಜ್ಯಗಳ ರೇಂಜ್ ಫಾರೆಸ್ಟ್ ಅಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries