ತಿರುವನಂತಪುರಂ: ರಾಜ್ಯದಲ್ಲಿ ಸಿಮೆಂಟ್ ಬೆಲೆ ಗಗನಕ್ಕೇರಿದೆ. ಎರಡು ದಿನಗಳಲ್ಲಿ ಸಿಮೆಂಟ್ ಚೀಲದ ಬೆಲೆ 125 ರೂ.ಏರಿಕೆಯಾಗಿದೆ. ಕೊರೋನಾ ಕರಿನೆರಳಿನ ಸಂಕಷ್ಟದಿಂದ ನಿರ್ಮಾಣ ವಲಯವು ಚೇತರಿಸಿಕೊಳ್ಳುತ್ತಿದ್ದಂತೆ ಈ ಬೆಲೆ ಏರಿಗೆ ಗಾಬರಿತರಿಸಿದೆ. ಕಚ್ಚಾ ವಸ್ತುಗಳ ಲಭ್ಯತೆಯ ಕೊರತೆಯೇ ಸಿಮೆಂಟ್ ಬೆಲೆ ಏರಿಕೆಗೆ ಕಾರಣ ಎಂದು ಕಂಪನಿಗಳು ಸೂಚಿಸುತ್ತವೆ.
ಕೊರೊನಾಗೆ ಪೂರ್ವದಲ್ಲಿ, ಒಂದು ಚೀಲ ಸಿಮೆಂಟ್ ಬೆಲೆ ಸುಮಾರು 390 ರೂ. ಆಸುಪಾಸು ಇತ್ತು. ತಿಂಗಳ ಹಿಂದೆ ರೂ.445 ರೂ.ವಿಗೆ ಜಿಗಿದಿತ್ತು. ನಂತರ ಅದನ್ನು ಕಂಪನಿಗಳು ನೀಡಿದ ರಿಯಾಯಿತಿಗಳನ್ನು ಒಳಗೊಂಡು 400 ರೂ.ಗೆ ಇಳಿಸಲಾಯಿತು. ಇಂದೀಗ 525 ರೂ.ಗೆ ಏರಿಕೆಯಾಗಿದೆ. ಏತನ್ಮಧ್ಯೆ, ನಿರ್ಮಾಣ ಕಂಪೆನಿಗಳು ಈಗಿರುವ ಸ್ಟಾಕ್ ಅನ್ನು ಹಳೆಯ ಬೆಲೆಗೆ ಮಾರಾಟ ಮಾಡುವುದಾಗಿ ಹೇಳಿವೆ.
ಈ ಬೆಲೆ ಏರಿಕೆ ಕಳೆದ ಮೂರುದಿನಗಳ ಹಣದುಬ್ಬರವು ಮೂರು ದಿನಗಳಲ್ಲಿ ಪ್ರತಿಫಲಿಸುತ್ತದೆ. ಏತನ್ಮಧ್ಯೆ, ಪೂರೈಕೆದಾರರು ಮತ್ತು ಗುತ್ತಿಗೆದಾರರು ಹಣದುಬ್ಬರದ ವಿರುದ್ಧ ಸಿಡಿದೆದ್ದಿದ್ದಾರೆ. ಅವರು ಬೆಲೆ ನಿಯಂತ್ರಣಕ್ಕೆ ಆಗ್ರಹಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಲೋಕೋಪಯೋಗಿ ಸಚಿವ ಮೊಹಮ್ಮದ್ ರಿಯಾಜ್ ಅವರಿಗೆ ಪತ್ರ ಬರೆದಿದ್ದಾರೆ. ಕೊರೋನಾ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳುತ್ತಿರುವ ಮಧ್ಯೆ ಬೆಲೆ ಏರಿಕೆಮಾಡಿರುವುದು ನ್ಯಾಯಯುತ ಅಲ್ಲ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.