ಕೊಲ್ಲಂ: ಕೇರಳ ಕುತೂಹಲದಿಂದ ಕಾಯುತ್ತಿದ್ದ ತೀರ್ಪು ಅಂತಿಮವಾಗಿ ಪ್ರಕಟಗೊಂಡಿದೆ. ಉತ್ತರಾ ಎಂಬ ಗೃಹಿಣಿಯನ್ನು ಬರ್ಬರವಾಗಿ ಹತ್ಯೆಗೈದ ಆಕೆಯ ಪತಿ ಸೂರಜ್ಗೆ ಎರಡು ಜೀವಾವಧಿ ಶಿಕ್ಷೆ ಮತ್ತು 5 ಲಕ್ಷ ರೂ. ದಂಡ, ಐಪಿಸಿ 302 ರ ಅಡಿಯಲ್ಲಿ ಅಪರಾಧಕ್ಕಾಗಿ ಸೂರಜ್ ಗೆ ಜೀವಾವಧಿ ಶಿಕ್ಷೆ ಮತ್ತು 5 ಲಕ್ಷ ರೂ. ದಂಡ ಕೊಲ್ಲಂ ಆರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಂ ಮನೋಜ್ ಅವರು ತೀರ್ಪು ನೀಡಿದ್ದಾರೆ. ಪ್ರಕರಣವು "ಅತ್ಯಂತ ಅಪೂರ್ವ" ಎಂದು ನ್ಯಾಯಾಲಯ ತೀರ್ಪಲ್ಲಿ ಉಲ್ಲೇಖಿಸಿದೆ.
ಕೊಲ್ಲಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಂ ಮನೋಜ್ ಮಂಗಳವಾರ ಸೂರಜ್ ದೋಷಿ ಎಂದು ತೀರ್ಪು ನೀಡಿದ್ದರು. ಏನಾದರೂ ಹೇಳಲು ಇದೆಯೇ ಎಂದು ನ್ಯಾಯಾಲಯ ಕೇಳಿದಾಗ, ಪ್ರತಿವಾದಿಯು ಏನೂ ಇಲ್ಲ ಎಂದು ಉತ್ತರಿಸಿದ್ದ.
ಉತ್ತರಾ ಮಲಗಿದ್ದಾಗ ಹಾವು ಕಚ್ಚಿ ಮೃತಳಾದಳೆಂದು ಆಕೆಯ ಪತಿ ಸೂರಜ್ ತಿಳಿಸಿದ್ದ. ವಿಜಯಸೇನನ ಮಗಳು ಉತ್ತರಾ (25) 2020ರ ಮೇ 6 ರಾತ್ರಿ ಮೃತಪಟ್ಟಿದ್ದಳು.
ಮೇ 6, 2020 ರಂದು, ಆಕೆಯ ಪತಿ ಸೂರಜ್ ಉತ್ತರಾ ಹಾವಿನಿಂದ ಕಚ್ಚಲ್ಪಟ್ಟಳು ಎಂದು ತಿಳಿಸಿದ್ದ. ರಾತ್ರಿ 7 ರ ವೇಳೆಗೆ ಉತ್ತರಾ ಶವವಾಗಿ ಪತ್ತೆಯಾಗಿದ್ದಳು. ಉತ್ರಾಳ ಪೋಷಕರು ದೂರಿನೊಂದಿಗೆ ಕೊಲ್ಲಂ ಗ್ರಾಮಾಂತರ ಎಸ್ಪಿಯನ್ನು ಸಂಪರ್ಕಿಸಿದರು. ಎಸಿ ಇರುವ ಕೋಣೆಗೆ ಹಾವು ಹೇಗೆ ಬಂದಿತು ಎಂಬ ಸಂಶಯ ಕಿಟಕಿಯ ಮುಚ್ಚಿದ ಬಾಗಿಲು ಕೊಲೆಯನ್ನು ಬಿಚ್ಚಿಟ್ಟಿತು.
ಪ್ರತ್ಯಕ್ಷದರ್ಶಿಗಳು ಇಲ್ಲದ ಪ್ರಕರಣದಲ್ಲಿ ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸುವ ಮೂಲಕ ಪೋಲೀಸರು ತನಿಖೆಯನ್ನು ನಡೆಸಿದರು. ಈ ಪ್ರಕರಣವು ಕೊಲೆಗೆ ಸಂಚು, ಕೊಲೆ ಯತ್ನ, ಉಲ್ಬಣಗೊಂಡ ಹಲ್ಲೆ ಮತ್ತು ತೀವ್ರ ದರೋಡೆ ಮಾಡುವ ಉದ್ದೇಶದಿಂದ ಹಲ್ಲೆ ಎಂದು ಉಲ್ಲೇಖಿಸಲಾಗಿದೆ.
ಆಕೆಯ ಪತಿ ಸೂರಜ್ ತಾನು ಆಸ್ತಿ ಪಡೆಯಲು ಉತ್ತರಾಳನ್ನು ಕೊಂದಿರುವುದಾಗಿ ತಪೆÇ್ಪಪ್ಪಿಕೊಂಡಿದ್ದ. ಜುಲೈನಲ್ಲಿ ಸಾಕ್ಷಿಗಾಗಿ ಆತನನ್ನು ಅಡೂರಿನಲ್ಲಿದ್ದ ಆತನ ಮನೆಗೆ ಕರೆತಂದಾಗ ಸೂರಜ್ ಸತ್ಯ ಬಹಿರಂಗಪಡಿಸಿದ.
ತನಿಖಾಧಿಕಾರಿ ಎಸ್ಪಿ ಹರಿಶಂಕರ್, ಆರೋಪಿ ಸೂರಜ್ ಅತ್ಯಂತ ಬುದ್ಧಿವಂತ ಮತ್ತು ಕ್ರೂರ ಎಂದು ಹೇಳಿದರು. ಇದು ತನಿಖೆಯಲ್ಲಿ ಸ್ಪಷ್ಟವಾಯಿತು. ಪ್ರತ್ಯಕ್ಷ ಸಾಕ್ಷಿಗಳ ಅನುಪಸ್ಥಿತಿಯಲ್ಲಿ ಗರಿಷ್ಠ ವೈಜ್ಞಾನಿಕ ಸಾಂದರ್ಭಿಕ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ.
ಕೊಲ್ಲಂ ಗ್ರಾಮಾಂತರ ಎಸ್ಪಿ ಹರಿಶಂಕರ್ ಅವರನ್ನು ಕೊಲೆ ಮಾಡಲಾಗಿದೆ ಎಂಬ ಸಂಶಯದ ದೂರಿನೊಂದಿಗೆ ಪೋಷಕರು ಭೇಟಿಯಾದಾಗ ತಿರುವು ಸಿಕ್ಕಿತು. ಪ್ರಕರಣವನ್ನು ಜಿಲ್ಲಾ ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಯಿತು. ಯಾವುದೇ ಸಾಕ್ಷಿಗಳಿಲ್ಲದ ಪ್ರಕರಣದಲ್ಲಿ ವೈಜ್ಞಾನಿಕ ಪುರಾವೆಗಳ ಸಂಗ್ರಹವನ್ನು ಆಧರಿಸಿ ತನಿಖೆ ನಡೆಸಲಾಯಿತು. ಉತ್ತರಾಳ ಮರಣೋತ್ತರ ಪರೀಕ್ಷೆ ವರದಿ, ಕಚ್ಚಿದ ಹಾವಿನ ಮರಣೋತ್ತರ ಪರೀಕ್ಷೆ ವರದಿ, ರಾಸಾಯನಿಕ ಪರೀಕ್ಷೆಗಳ ಫಲಿತಾಂಶಗಳು, ಮೊಬೈಲ್ ಫೆÇೀನ್ಗಳ ವಿಧಿವಿಜ್ಞಾನ ಪರೀಕ್ಷೆ ಮತ್ತು ಡಮ್ಮಿ ಪರೀಕ್ಷೆ ನಡೆಸಲಾಯಿತು.
ಕೊಲೆಗೆ ಸಂಚು (302), ಕೊಲೆ ಯತ್ನ (307), ಉಗ್ರ ದಾಳಿ (326) ಮತ್ತು ಅರಣ್ಯ ಮತ್ತು ವನ್ಯಜೀವಿ ಕಾಯ್ದೆ (115) ಸೇರಿವೆ. 90 ದಿನಗಳೊಳಗೆ ಪೋಲೀಸರು ದೋಷಾರೋಪ ಪಟ್ಟಿ ಸಲ್ಲಿಸಲು ಸಾಧ್ಯವಾಯಿತು. ನ್ಯಾಯಾಲಯದ ತೀರ್ಪಿನ ನಂತರ, ಈ ಪ್ರಕರಣದಲ್ಲಿ ಕ್ಷಮೆ ಕೇಳುವ ಮತ್ತು ಹಾವು ಹಿಡಿದು ಕೊಲೆಗೆ ನೆರವಾದ ಕಲ್ಲುವಾತುಕಲ್ ಚವರುಕದ ಸುರೇಶನನ್ನು ಬಿಡುಗಡೆ ಮಾಡಲು ಆದೇಶನೀಡಲಾಗಿತ್ತು. ಸೂರಜ್ ಸುರೇಶನಿಂದ ಹಾವನ್ನು ಖರೀದಿಸಿದ್ದನು. ಆತನ ಬಂಧನದ ನಂತರ ಪೋಲೀಸರು ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು.
ಉತ್ರಾ ಕೊಲೆ ಪ್ರಕರಣ ವಿಧಿ ವಿಜ್ಞಾನದಲ್ಲಿ ಹೊಸ ಅಧ್ಯಾಯವನ್ನು ನಿರ್ಮಿಸಿದೆ. ಈ ಪ್ರಕರಣವು ಪ್ರಾಣಿಗಳ ವಧೆಯ ಅಧ್ಯಯನಕ್ಕೆ ಕಾರಣವಾಯಿತು. ಹಾವು ಸ್ವಾಭಾವಿಕವಾಗಿ ಕಚ್ಚಿದಾಗ ಹಲ್ಲುಗಳ ನಡುವಿನ ಅಂತರ ಮತ್ತು ಬಲದಿಂದ ಕಚ್ಚಿದಾಗ ಹಲ್ಲುಗಳ ನಡುವಿನ ಅಂತರ ಮೊದಲಾದವುಗಳ ವಿಸ್ಕøತ ಅ|ಧ್ಯಯನ ಈ ಮೂಲಕ ನಡೆದಿದೆ.
ವಿವಿಧ ಸಂಸ್ಥೆಗಳು ದೇಹಕ್ಕೆ ಸೇರುವ ಜೀವಾಣುಗಳ ಮಟ್ಟವನ್ನು ಅಧ್ಯಯನ ಮಾಡಲು ಆರಂಭಿಸಿವೆ. ಭಾರತದಲ್ಲಿ ಹಾವು ಕಡಿತದ 3 ಪ್ರಕರಣಗಳು ವರದಿಯಾಗಿವೆ. ಹಿಂದಿನ ಎರಡು ಪ್ರಕರಣಗಳಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಮೂರನೆಯದು ಉತ್ತರ ಕೊಲೆ ಪ್ರಕರಣ.