HEALTH TIPS

ಮಹಿಳಾ ಸಂರಕ್ಷಣಾ ಕಾನೂನು ದುರುಪಯೋಗವಾಗದಂತೆ ನಿಗಾವಹಿಸಬೇಕು-ಮಹಿಳಾ ಆಯೋಗ

           ಕಾಸರಗೋಡು: ವಿಶೇಷ ತರಬೇತಿ, ಸಂರಕ್ಷಣೆ ಖಚಿತಪಡಿಸುವ ನಿಟ್ಟಿನಲ್ಲಿ ರಚಿಸಲಾದ ಕಾನೂನುಗಳನ್ನು ದುರುಪಯೋಗವಾಗದಂತೆ ಪೊಲೀಸರು ನಿಗಾವಹಿಸಬೇಕು ಎಂದು ರಾಜ್ಯ ಮಹಿಳಾ ಆಯೋಗ ಸದಸ್ಯೆ ಷಾಹಿದಾ ಕಮಾಲ್ ತಿಳಿಸಿದ್ದಾರೆ.

            ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ರಾಜ್ಯ ಮಹಿಳಾ ಆಯೋಗದ ಮೆಗಾ ಅದಾಲತ್ ವೇಳೆ ಅವರು ಮಾತನಾಡಿದರು. ಅದಾಲತ್ ನಲ್ಲಿ 29 ದೂರುಗಳನ್ನು ಪರಿಶೀಲಿಸಲಾಯಿತು. ಇವುಗಳಲ್ಲಿ 6 ಪ್ರಕರಣಗಳಿಗೆ ತೀರ್ಪು ನೀಡಲಾಗಿದೆ. 23 ದೂರುಗಳನ್ನು ಮುಂದಿನ ಅದಾಲತ್‍ನಲ್ಲಿ ಪರಿಗಣಿಸಲು ತೀರ್ಮಾನಿಸಲಾಯಿತು. ಪತಿ ಮತ್ತು ಪತ್ನಿ ವಿಚ್ಛೇದನೆಗೊಂಡಿರುವ ಪ್ರಕರಣವೊಂದಕ್ಕೆ ಸಂಬಂಧಿಸಿ ಮೊದಲ ಸಿಟ್ಟಿಂಗ್ ನಲ್ಲೇ ತೀರ್ಪು ನೀಡಲಾಗಿದ್ದುಮ ಈ ಸಂದರ್ಭ ಇವರ ಮಕ್ಕಳೂ ಹಾಜರಾಗಿದ್ದರು. ವಿಸ್ತೃತ ಕೌನ್ಸಿಲಿಂಗ್ ನ ನಂತರ ದಂಪತಿಯನ್ನು ಒಗ್ಗೂಡಿಸಿರುವುದಾಗಿ ಷಾಹಿದಾ ಕಮಾಲ್ ತಿಳಿಸಿದರು.

           ಸತತ ಎರಡು ಸಿಟ್ಟಿಂಗ್‍ನಲ್ಲೂ ಹಾಜರಾಗದ ಪ್ರಕರಣವೊಂದರಲ್ಲಿ ಪ್ರತಿಕಕ್ಷಿಗೆ ನೋಟೀಸು ನೀಡುವಂತೆ ಸ್ಥಳೀಯ ಪೆÇಲೀಸರಿಗೆ ಆದೇಶ ನೀಡಲಾಗಿದೆ. ನ್ಯಾಯವಾದಿಗಳ ಪಾನೆಲ್ ನ ರೇಣುಕಾ ದೇವಿ ತಂಗಚ್ಚಿ ಎಸ್., ಸಿಂಧು ಪಿ. ಉಪಸ್ಥಿತರಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries