HEALTH TIPS

ರಾಜ್ಯದಲ್ಲಿ ಚಿತ್ರಮಂದಿರಗಳು ಸೋಮವಾರದಿಂದ ಕಾರ್ಯಾರಂಭ: ಮೊದಲ ಚಿತ್ರ ದುಲ್ಕರ್ ಅಭಿನಯದ ಕುರುಪ್: ಎರಡನೇ ಪ್ರದರ್ಶನಕ್ಕೆ ಅನುಮತಿ

                                                                

               ತಿರುವನಂತಪುರ: ಸುದೀರ್ಘ ವಿರಾಮದ ಬಳಿಕ ರಾಜ್ಯದಲ್ಲಿ ಮತ್ತೆ ಸಿನಿಮಾ ಥಿಯೇಟರ್ ಗಳು ಸಕ್ರಿಯವಾಗಲು ಸಿದ್ಧವಾಗುತ್ತಿವೆ. ಮಂತ್ರಿ ಸಜಿ ಚೆರಿಯನ್ ಮತ್ತು ಥಿಯೇಟರ್ ಮಾಲೀಕರ ಸಂಘದ ನಡುವಿನ ಮಾತುಕತೆ ಯಶಸ್ವಿಯಾಗಿದೆ. ತಮ್ಮ ಬೇಡಿಕೆಗಳನ್ನು ಪರಿಗಣಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದು ಸಂಘಟನೆಗಳು ಹೇಳಿವೆ. ಎರಡನೇ ಪ್ರದರ್ಶನಕ್ಕೂ ಪರವಾನಗಿ ನೀಡಲಾಗಿದೆ.

                         ಮನರಂಜನಾ ತೆರಿಗೆಯಲ್ಲಿ ಸಡಿಲಿಕೆ, ಥಿಯೇಟರ್ ಕಾರ್ಯನಿರ್ವಹಿಸದ ತಿಂಗಳುಗಳಲ್ಲಿ ಕೆ ಎಸ್ ಇ ಬಿ ನಿಶ್ಚಿತ ಠೇವಣಿ ಮನ್ನಾ ಮತ್ತು ಕಟ್ಟಡ ತೆರಿಗೆಯನ್ನು ಮನ್ನಾ ಮಾಡಬೇಕು ಎಂದು ಚಿತ್ರಮಂದಿರಗಳ ಮಾಲೀಕರ ಸಂಘ ಒತ್ತಾಯಿಸಿದೆ. 50 ಶೇ. ಕುಳಿತುಕೊಳ್ಳುವ ಸಾಮಥ್ರ್ಯದಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಸಿಬ್ಬಂದಿ ಮತ್ತು ಪ್ರೇಕ್ಷಕರಿಗೆ ಲಸಿಕೆಯ ಎರಡು ಡೋಸ್ ತೆಗೆದುಕೊಳ್ಳಲು ಸೂಚಿಸಲಾಗಿದೆ.

                    ಚಿತ್ರಮಂದಿರಗಳು ತೆರೆದಾಗ, ದುಲ್ಕರ್ ಸಲ್ಮಾನ್ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ಕುರುಪ್ ಚಿತ್ರ ಮೊದಲ ಪ್ರದರ್ಶನ ಕಾಣಲಿದೆ.  ಚಿತ್ರ ನವೆಂಬರ್ 12 ರಂದು ಬಿಡುಗಡೆಯಾಗಲಿದೆ. ಕೊರೋನದ ಮೊದಲ ಅಲೆಯ ನಂತರ ಥಿಯೇಟರ್‍ಗಳು ಪುನಃ ತೆರೆಯಲ್ಪಟ್ಟು  ಬಹಳ ಬೇಗನೆ ಮತ್ತೆ ಮುಚ್ಚಲ್ಪಟ್ಟವು. ಹೀಗಿರುವಾಗ ಪರಭಾಷೆಯ ಚಿತ್ರಗಳೇ ಮೊದಲು ಥಿಯೇಟರ್ ಗೆ ಬರಲಿವೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries