HEALTH TIPS

ನ್ಯೂಮೊಕೊಕಲ್ ಲಸಿಕೆ ರಾಷ್ಟ್ರವ್ಯಾಪಿ ವಿಸ್ತರಣೆ: ಮನ್‌ಸುಖ್‌ ಮಾಂಡವೀಯಾ

                 ನವದೆಹಲಿ: ರಾಷ್ಟ್ರವ್ಯಾಪಿ ನ್ಯೂಮೊಕೊಕಲ್ ಲಸಿಕೆ (ಪಿಸಿವಿ) ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿದ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯಾ ಅವರು, ಈ ಲಸಿಕೆಯಿಂದ ಬಾಲ್ಯದಲ್ಲಿನ ಮರಣ ಪ್ರಮಾಣವನ್ನು ಶೇ 60ರಷ್ಟು ತಡೆಗಟ್ಟಬಹುದು ಎಂದು ಹೇಳಿದ್ದಾರೆ.

              ಇದೇ ಸಂದರ್ಭದಲ್ಲಿ ಪಿಸಿವಿ ಕುರಿತು ಸಂವಹನ ಮತ್ತು ಜಾಗೃತಿ ಕುರಿತ ಪ್ಯಾಕೇಜ್‌ಗಳನ್ನು ಬಿಡುಗಡೆ ಮಾಡಿದ ಸಚಿವರು, ದೇಶದಲ್ಲಿ ಇದೇ ಮೊದಲ ಬಾರಿಗೆ ಪಿಸಿವಿ ಸಾರ್ವತ್ರಿಕ ಬಳಕೆಗೆ ಲಭ್ಯವಾಗಲಿದೆ ಎಂದರು.

            'ಜಾಗತಿಕವಾಗಿ ಮತ್ತು ಭಾರತದಲ್ಲಿ ಐದು ವರ್ಷದೊಳಗಿನ ಮಕ್ಕಳ ಸಾವಿಗೆ ನ್ಯೂಮೋನಿಯಾ ಮುಖ್ಯ ಕಾರಣ. ನ್ಯೂಮೊಕೊಕಸ್ ಬ್ಯಾಕ್ಟೀರಿಯಾದಿಂದ ಉಂಟಾಗುವ ನ್ಯೂಮೋನಿಯಾದಿಂದ ದೇಶದಲ್ಲಿ ಶೇ 16ರಷ್ಟು ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ನ್ಯೂಮೊಕೊಕಲ್ ಲಸಿಕೆ ಪರಿಣಾಮಕಾರಿಯಾಗಿದೆ' ಎಂದು ಅವರು ವಿವರಿಸಿದರು.

          'ಪಿಸಿವಿ ಲಸಿಕೆಯು ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡುವುದರ ಜೊತೆಗೆ ಆರೋಗ್ಯಕರ ಬೆಳವಣಿಗೆಗೆ ಪೂರಕವಾಗಿದೆ' ಎಂದ ಮಾಂಡವೀಯಾ ಅವರು, ಈ ಜೀವರಕ್ಷಕ ಲಸಿಕೆಯನ್ನು ಹೊರತರುವಲ್ಲಿ ಶ್ರಮಿಸಿದ ಎಲ್ಲಾ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು ಮತ್ತು ಅಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries