ತಿರುವನಂತಪುರಂ: ಒಂದೂವರೆ ವರ್ಷದ ನಂತರ ಶಾಲೆಗಳನ್ನು ನಾಳೆ ತೆರೆಯಲಾಗುತ್ತಿದ್ದು, ನಾಳೆಯ ದಿನ ಮಹತ್ವದ್ದು ಎಂದು ಶಿಕ್ಷಣ ಸಚಿವ ವಿ.ಶಿವಂಕುಟ್ಟಿ ಹೇಳಿದ್ದಾರೆ. ಶಾಲೆಗಳ ಆರಂಭಕ್ಕೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಚಿಂತಿಸಬೇಕಾಗಿಲ್ಲ. ಸರಕಾರ ಎಲ್ಲ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದೆ ಎಂದರು.
ಮಕ್ಕಳಿಗೆ ಕಲಿಸಲು ಶಿಕ್ಷಕರ ಕೊರತೆ ಇರುವ ಕಡೆಸ ಶಿಕ್ಷಕರನ್ನು ನೇಮಿಸಲು ಕ್ರಮಕೈಗೊಳ್ಳಲಾಗಿದೆ. 446 ಶಾಲೆಗಳು ಫಿಟ್ನೆಸ್ ಪಡೆದಿಲ್ಲ. 282 ಶಿಕ್ಷಕರು ಇನ್ನೂ ಲಸಿಕೆ ಹಾಕಿಲ್ಲ. ಈ ಶಿಕ್ಷಕರಿಗೆ ಶಾಲೆಗಳಿಗೆ ಬರದಂತೆ ಮತ್ತು ಮನೆಯಿಂದಲೇ ಮಕ್ಕಳಿಗೆ ಆನ್ಲೈನ್ನಲ್ಲಿ ಪಾಠ ಮಾಡುವಂತೆ ಸೂಚಿಸಲಾಗಿದೆ.
ಶಾಲೆಗಳು ಆರಂಭಗೊಂಡ ಬಳಿಕ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳ ಕುರಿತು ಮಾರ್ಗಸೂಚಿಗಳನ್ನು ನೀಡಲಾಗಿದೆ. ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಶೇ.25ಕ್ಕೆ ನಿಗದಿಪಡಿಸಬೇಕು. ಬೆಂಚ್ ವೊಂದರಲ್ಲಿ ಇಬ್ಬರು ಮಕ್ಕಳಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶವಿದೆ. ಮಕ್ಕಳು ಊಟ ಮಾಡುವಾಗ ಪರಸ್ಪರ ಎರಡು ಮೀಟರ್ ಅಂತರ ಕಾಯ್ದುಕೊಳ್ಳಬೇಕು.