HEALTH TIPS

ಇಸ್ರೊ ಬೇಹುಗಾರಿಕೆ: ಮಾಜಿ ಡಿಜಿಪಿಗೆ ನೀಡಿದ್ದ ನಿರೀಕ್ಷಣಾ ಜಾಮೀನು ಮಿತಿ ರದ್ದು

                ಕೊಚ್ಚಿ: 1994ರ ಇಸ್ರೊ ಬೇಹುಗಾರಿಕೆ ಪ್ರಕರಣದಲ್ಲಿ ಕೇರಳದ ಮಾಜಿ ಡಿಜಿಬಿ ಸಿ.ಬಿ.ಮ್ಯಾಥ್ಯೂಸ್ ಅವರಿಗೆ ಕೆಳ ಹಂತದ ನ್ಯಾಯಾಲಯ ನೀಡಿದ್ದ ನಿರೀಕ್ಷಣಾ ಜಾಮೀನಿನ 60 ದಿನಗಳ ಮಿತಿಯನ್ನು ಕೇರಳ ಹೈಕೋರ್ಟ್‌ ಮಂಗಳವಾರ ರದ್ದುಗೊಳಿಸಿದೆ.

              ಮ್ಯಾಥ್ಯೂಸ್‌ ಪರ ವಾದಿಸಿದ ವಕೀಲರಾದ ಪಿ.ವಿಜಯ ಭಾನು, ಅಜೀಶ್ ಕೆ.

ಸಸಿ ಮತ್ತು ಪಿ.ಎಂ.ರಫೀಕ್ ಅವರು 'ವಿಚಾರಣಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಿ, ಅದಕ್ಕೆ ಮಿತಿ ಹಾಕಿದ್ದು ತಪ್ಪಾಗಿದೆ' ಎಂದು ಪ್ರತಿಪಾದಿಸಿದ್ದರು.

              ಈ ಪ್ರಕರಣದಲ್ಲಿ ಮೂವರು ಮಾಜಿ ಪೊಲೀಸ್ ಅಧಿಕಾರಿಗಳು ಹಾಗೂ ಗುಪ್ತಚರ ಇಲಾಖೆಯ ಒಬ್ಬ ನಿವೃತ್ತ ಅಧಿಕಾರಿಗೆ ಕೇರಳ ಹೈಕೋರ್ಟ್‌ ಆಗಸ್ಟ್‌ 13ರಂದು ನಿರೀಕ್ಷಾ ಜಾಮೀನು ನೀಡಿದ್ದು, ಸಿಬಿಐ ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.

            ಬೇಹುಗಾರಿಕೆ ಪ್ರಕರಣದಲ್ಲಿ ಇಸ್ರೊ ಮಾಜಿ ವಿಜ್ಞಾನಿ ನಂಬಿ ನಾರಾಯಣನ್‌ ಮತ್ತು ಮಾಲ್ಡೀವ್ಸ್‌ನ ಇಬ್ಬರು ಪ್ರಜೆಗಳನ್ನು ಬಂಧಿಸಿದ ವಿಚಾರದಲ್ಲಿ ಮಾಥ್ಯೂಸ್‌ ಸೇರಿದಂತೆ ಇತರೆ 17 ಮಂದಿ ಕೇರಳದ ಮಾಜಿ ಪೊಲೀಸ್ ಅಧಿಕಾರಿಗಳು ಮತ್ತು ಗುಪ್ತಚರ ಅಧಿಕಾರಿಗಳು ಸಿಬಿಐ ತನಿಖೆ ಎದುರಿಸುತ್ತಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries