HEALTH TIPS

ಕೇರಳದಲ್ಲಿ ಕಾಂಗ್ರೆಸ್ ಬಲಗೊಳ್ಳಲಿದೆ: ತಾರಿಕ್ ಅನ್ವರ್

                   ತಿರುವನಂತಪುರ: ಎಲ್ಲ ವರ್ಗದ ಜನರನ್ನು ಕಾಂಗ್ರೆಸ್ ಗೆ ಹತ್ತಿರ ತರುತ್ತೇನೆ ಎಂದು ಕಾಂಗ್ರೆಸ್ ಕೇಂದ್ರ ಮುಖಂಡ ತಾರಿಕ್ ಅನ್ವರ್ ಹೇಳಿದ್ದಾರೆ. ಕೇರಳದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಗುರಿ ಹೊಂದಲಾಗಿದೆ. ಕಾಂಗ್ರೆಸ್ ನಲ್ಲಿ ಸಂಘಟನಾ ಚುನಾವಣೆ ಮೂಲಕ ಸಮಾಜವಾದ, ಪ್ರಜಾಪ್ರಭುತ್ವ, ಜಾತ್ಯತೀತತೆ ಬಲಗೊಳ್ಳಲು ಸಾಧ್ಯ ಎಂದು ತಾರಿಕ್ ಅನ್ವರ್ ಹೇಳಿದರು.

                       ಸುದೀರ್ಘ ಕಾಯುವಿಕೆಯ ನಂತರ ಪಕ್ಷದ ಸಂಘಟನಾ ಚುನಾವಣೆ ನಡೆಯುತ್ತಿದೆ. ಹೊಸ ನಾಯಕತ್ವದ ಉದಯ ಕಾಂಗ್ರೆಸ್‍ಗೆ ಶಕ್ತಿ, ಯುಕ್ತಿ ಹಾಗೂ ನವ ಚೈತನ್ಯ ನೀಡಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್ ಹೇಳಿದರು. ಪ್ರಜಾಸತ್ತಾತ್ಮಕ ಚುನಾವಣೆ ನಡೆಸುವುದು ಗುರುತರ ಜವಾಬ್ದಾರಿಯಾಗಿದೆ. ಸಂಘದ ಚುನಾವಣೆಯನ್ನು ಎದುರು ನೋಡುತ್ತಿದ್ದೇನೆ ಎಂದು ಸುಧಾಕರನ್ ಹೇಳಿದರು.

              ಕಾಂಗ್ರೆಸ್ ಪ್ರತಿಭಟನೆಯನ್ನು ವಿರೋಧಿಸಿ ನಿನ್ನೆ ನಟ ಜೊಜೊ ಜಾರ್ಜ್ ಅವರ ಕಾರನ್ನು ಕಾಂಗ್ರೆಸ್ ಕಾರ್ಯಕರ್ತರು ಪುಡಿಗೈದಿದ್ದರು. ಆ ಬಳಿಕ ಪಕ್ಷವನ್ನು ಬಲಪಡಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡರ ಹೇಳಿಕೆ ಅಚ್ಚರಿ ತಂದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries