HEALTH TIPS

ಆಸ್ತಿ ಸ್ವಾದೀನಪಡಿಸಲು 93ರ ಹರೆಯದ ತಾಯಿಗೆ ಥಳಿಸಿ ನಲುಗಿಸಿದ ಮಕ್ಕಳು: ಅಮಾನುಷತತೆ: ಮೊದಲ ಆರೋಪಿ ಪುತ್ರನ ಬಂಧನ; ತಲೆಮರೆಸಿಕೊಂಡ ಉಳಿದ ಮಕ್ಕಳು

                           

                  ಕಣ್ಣೂರು: ಮಠಮಂಗಲ ಎಂಬಲ್ಲಿ ವಯೋವೃದ್ದೆಗೆ ಮಕ್ಕಳೇ ಥಳಿಸಿದ ಪ್ರಕರಣದ ಮೊದಲ ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ. ವೃದ್ದೆಯ ಪುತ್ರ ರವೀಂದ್ರನನ್ನು ಬಂಧಿಸಲಾಗಿದೆ, ಉಳಿದ ಮಕ್ಕಳು ತಲೆಮರೆಸಿಕೊಂಡಿದ್ದಾರೆ. 

                 ಮೃತ ಸಹೋದರಿಯ  ಆಸ್ತಿಯನ್ನು ಉಳಿದಿರುವ ಮಕ್ಕಳಿಗೆ ಹಂಚುವಂತೆ ಒತ್ತಾಯಿಸಿ ಮೀನಾಕ್ಷಿಯಮ್ಮ ಅವರನ್ನು ನಾಲ್ವರು ಮಕ್ಕಳು ಥಳಿಸಿದ್ದಾರೆ. ಥಳಿತದ ವೇಳೆ ಮೀನಾಕ್ಷಿ ಅವರ ಕೈ, ಕಾಲು ಮತ್ತು ಎದೆಗೆ ಗಾಯಗಳಾಗಿವೆ.

                    ಮಠಮಂಗಲಂ ಪೇರುಲ್ ನಲ್ಲಿರುವ ಮೀನಾಕ್ಷಿ ಎಂಬುವವರ ಮನೆಯಲ್ಲಿ ಇದೇ ತಿಂಗಳ 15ರಂದು ಘಟನೆ ನಡೆದಿದೆ. ತೊಂಬತ್ಮೂರು ವರ್ಷದ ತಮ್ಮ ತಾಯಿಯೊಂದಿಗೆ  ಆಸ್ತಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸಂಭಾಷಣೆಯನ್ನು ಹೊಲದಲ್ಲಿ ಆಡುತ್ತಿದ್ದ ಮಕ್ಕಳು ರೆಕಾರ್ಡ್ ಮಾಡಿದ್ದರು. 

                 ನಾಲ್ಕು ಮಕ್ಕಳು ತಾಯಿಯ ಕೈ ಹಿಡಿದು ಹಿಂಬದಿ ಮಡಚಿದರು. ಕಾಲುಗಳನ್ನೂ ಹಿಸುಕಿ ಬಲವಾಗಿ ಮೆಟ್ಟಲಾಯಿತು. ನಂತರ ಎದೆಯನ್ನು ಹಿಡಿದು ತಾಯಿಯನ್ನು ತಳ್ಳಿದರು. ಆದರೆ, ಸಹಿ ಮಾಡದ ತಾಯಿಯನ್ನು ಅಶ್ಲೀಲ ರೀತಿಯಲ್ಲಿ ಹಿಡಿದುಕೊಂಡು ಬಲವಂತವಾಗಿ ಸಹಿ ಹಾಕಿಸಿದ್ದಾರೆ.

                      ಮೀನಾಕ್ಷಿ ಅವರ 10 ಮಕ್ಕಳಲ್ಲಿ ಮೂವರು ಮಕ್ಕಳು ಈಗಾಗಲೇ ಮೃತರಾಗಿದ್ದಾರೆ. ಅನಾರೋಗ್ಯದಿಂದ ಮೃತಪಟ್ಟ ಪುತ್ರಿ ಓಮನ ಅವರಿಗೆ ಬೇರೆ ವಾರಸುದಾರರಿಲ್ಲ. ಹಾಗಾಗಿ ಓಮನಳ ಆಸ್ತಿಯನ್ನು ಉಳಿದಿರುವ ನಾಲ್ವರು ಪುತ್ರರಿಗೆ ಹಂಚಬೇಕೆಂದು ಈ ಕ್ರೂರತೆ ಮೆರೆಯಲಾಗಿದೆ. ರವೀಂದ್ರನ್, ಅಮ್ಮಿನಿ, ಸೌದಾಮಿನಿ ಮತ್ತು ಪದ್ಮಿನಿ ವಿರುದ್ಧ ಪ್ರಕರಣ ದಾಖಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries