HEALTH TIPS

ಸಂವಿಧಾನ ರಚನಾ ಸಭೆ: ಯುವಜನತೆಗೆ ಅರಿವು ಅಗತ್ಯ ಎಂದ ಪ್ರಧಾನಿ ಮೋದಿ

               ನವದೆಹಲಿ75 ವರ್ಷಗಳ ಹಿಂದೆ ಡಿ.9ರಂದು ಸಂವಿಧಾನ ರಚನಾ ಸಭೆಯು ಮೊದಲ ಬಾರಿಗೆ ಸಭೆ ಸೇರಿತ್ತು. ಈ ದಿನವನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದಾರೆ. ಈ ಸಂವಿಧಾನ ರಚನಾ ಕೂಟದ ನಡಾವಳಿಗಳು ಮತ್ತು ಈ ಸಭೆಯಲ್ಲಿ ಭಾಗವಹಿಸಿದ್ದ ಧೀಮಂತ ವ್ಯಕ್ತಿಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂದು ಯುವಜನತೆಗೆ ಅವರು ಒತ್ತಾಯಿಸಿದರು.

                1946ರ ಡಿಸೆಂಬರ್‌ 9 ರಂದು ಸಂವಿಧಾನ ರಚನಾ ಸಭೆಯು ಮೊದಲ ಬಾರಿಗೆ ಸಭೆ ಸೇರಿತು. ಇದು 1947ರ ಆಗಸ್ಟ್‌ 14 ರಂದು ಸಾರ್ವಭೌಮ ಸಂಸ್ಥೆಯಾಗಿ ಹೊರಹೊಮ್ಮಿತು.


              '75 ವರ್ಷಗಳ ಹಿಂದೆ ಇಂದು ಸಂವಿಧಾನ ರಚನಾ ಸಭೆಯು ಮೊದಲ ಬಾರಿಗೆ ಸಭೆ ಸೇರಿತು. ಭಾರತದ ವಿವಿಧ ಭಾಗಗಳಿಂದ, ವಿವಿಧ ಹಿನ್ನೆಲೆಯ ಮತ್ತು ವಿಭಿನ್ನ ಸಿದ್ಧಾಂತಗಳನ್ನು ಹೊಂದಿದ ಪ್ರತಿಷ್ಠಿತ ವ್ಯಕ್ತಿಗಳು ಭಾರತಕ್ಕೆ ಒಂದು ಉತ್ತಮ ಸಂವಿಧಾನ ನೀಡುವ ಏಕಮಾತ್ರ ಗುರಿಯೊಂದಿಗೆ ಒಟ್ಟಾಗಿ ಸೇರಿದ್ದರು. ಈ ಮಹನೀಯರಿಗೆ ನಮನಗಳು' ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries