ತಿರುವನಂತಪುರ: ಕೇರಳದಲ್ಲಿ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಶನಿವಾರ ಮತ್ತು ಭಾನುವಾರ ಹನ್ನೆರಡು ರೈಲುಗಳನ್ನು ರದ್ದುಗೊಳಿಸಲಾಗಿದೆ. ಈ ರೈಲುಗಳು ತಿರುವನಂತಪುರ ಮತ್ತು ಪಾಲಕ್ಕಾಡ್ ವಿಭಾಗಗಳಿಂದ ಸಂಚರಿಸುವ ರೈಲುಗಳಾಗಿದ್ದು, ವೈರಸ್ ಹರಡುವ ಕಾರಣ ಭದ್ರತಾ ಕ್ರಮಗಳ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ರದ್ದಾದ ರೈಲುಗಳು ಕೆಳಗಿವೆ:
ತಿರುವನಂತಪುರಂ ವಿಭಾಗ
1) ನಾಗರ್ಕೋಯಿಲ್-ಕೊಟ್ಟಾಯಂ ಎಕ್ಸ್ಪ್ರೆಸ್ (16366)
2) ಕೊಟ್ಟಾಯಂ-ಕೊಲ್ಲಂ ಅನ್ರಿಸವ್ರ್ಡ್ ಎಕ್ಸ್ಪ್ರೆಸ್ (06431)
3) ಕೊಲ್ಲಂ - ತಿರುವನಂತಪುರಂ ಅನ್ರಿಸವ್ರ್ಡ್ ಎಕ್ಸ್ಪ್ರೆಸ್ (06425)
4) ತಿರುವನಂತಪುರಂ - ನಾಗರ್ಕೋಯಿಲ್ ಅನ್ರಿಸವ್ರ್ಡ್ ಎಕ್ಸ್ಪ್ರೆಸ್ (06435)
ಪಾಲಕ್ಕಾಡ್ ವಿಭಾಗ
1) ಶೋರ್ನೂರ್-ಕಣ್ಣೂರು ಕಾಯ್ದಿರಿಸದ ಎಕ್ಸ್ಪ್ರೆಸ್ (06023)
2) ಕಣ್ಣೂರು-ಶೋರ್ನೂರ್ ಕಾಯ್ದಿರಿಸದ ಎಕ್ಸ್ಪ್ರೆಸ್ (06024)
3) ಕಣ್ಣೂರು-ಮಂಗಳೂರು ಕಾಯ್ದಿರಿಸದ ಎಕ್ಸ್ಪ್ರೆಸ್ (06477)
4) ಮಂಗಳೂರು-ಕಣ್ಣೂರು ಕಾಯ್ದಿರಿಸದ ಎಕ್ಸ್ಪ್ರೆಸ್ (06478)
5) ಕೋಝಿಕ್ಕೋಡ್-ಕಣ್ಣೂರು ಕಾಯ್ದಿರಿಸದ ಎಕ್ಸ್ಪ್ರೆಸ್ 06481).
6) ಕಣ್ಣೂರು-ಚರ್ವತೂರ್ ಕಾಯ್ದಿರಿಸದ ಎಕ್ಸ್ಪ್ರೆಸ್ (06469)
7) ಚರ್ವತ್ತೂರು-ಮಂಗಳೂರು ಕಾಯ್ದಿರಿಸದ ಎಕ್ಸ್ಪ್ರೆಸ್ (06491)
8) ಮಂಗಳೂರು-ಕೋಝಿಕೋಡ್ ಎಕ್ಸ್ಪ್ರೆಸ್ (16610)