HEALTH TIPS

ರಾಜ್ಯಪಾಲರ ಮನವೊಲಿಸಲು ಮುಂದಾದ ಮುಖ್ಯಮಂತ್ರಿ: ಕುಲಪತಿಯಾಗಿ ಮುಂದುವರಿಯಲು ಮನವಿ

                                                 

              ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕುಲಪತಿ ಹುದ್ದೆ ಮೇಲಿನ ಚರ್ಚೆ ಸಬಂಧ  ರಾಜ್ಯಪಾಲರ ಮನವೊಲಿಸಲು ಮುಂದಾಗಿದ್ದಾರೆ. ಮುಖ್ಯಮಂತ್ರಿಗಳು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು  ಕುಲಪತಿಯಾಗಿ ಮುಂದುವರಿಯುವಂತೆ ಮನವಿ ಮಾಡಿದರು.

                  ವಿಶ್ವವಿದ್ಯಾನಿಲಯ-ಡಿ-ಲಿಟ್ ವಿವಾದದ ನಂತರ ಇದೇ ಮೊದಲ ಬಾರಿಗೆ ಸಿಎಂ ರಾಜ್ಯಪಾಲರಲ್ಲಿ ಮಾತುಕತೆನಡೆಸಿದ್ದಾರೆ. ಚಿಕಿತ್ಸೆಗೆಂದು ಅಮೆರಿಕಕ್ಕೆ ಹೋಗುತ್ತಿದ್ದೇನೆ ಎಂದು ದೂರವಾಣಿಯಲ್ಲಿ ಹೇಳಿದಾಗ ಮುಖ್ಯಮಂತ್ರಿಗಳು ಈ ಮನವಿ ಮಾಡಿದರು. ರಾಜ್ಯಪಾಲರಿಗೆ ವಿದೇಶಕ್ಕೆ ಹೋಗುವ ವಿವರವನ್ನೂ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.

            ಆದರೆ, ಪಕ್ಷದ ಸಮಾವೇಶದಲ್ಲಿ ಬಿಡುವಿಲ್ಲದ ಕಾರಣ ರಾಜ್ಯಪಾಲರನ್ನು ಖುದ್ದು ಭೇಟಿ ಮಾಡಲು ಸಾಧ್ಯವಾಗಿಲ್ಲ ಎಂದು ಸಿಎಂ ಹೇಳಿದ್ದಾರೆ. ನಿನ್ನೆ  ಮಧ್ಯಾಹ್ನ ರಾಜಭವನಕ್ಕೆ ಮುಖ್ಯಮಂತ್ರಿಗಳು ರಾಜ್ಯಪಾಲರೊದಿಗೆ ಕರೆಮಾಡಿ ಮಾತನಾಡಿದರು. 

                   ಈ ಹಿಂದೆ ಮುಖ್ಯಮಂತ್ರಿಗಳು ರಾಜ್ಯಪಾಲರ ಪತ್ರಕ್ಕೆ ಮೂರು ಬಾರಿ ಉತ್ತರ ಪತ್ರ ರವಾನಿಸಿದ್ದು, ಕುಲಪತಿ ಹುದ್ದೆಯಿಂದ ಕೆಳಗಿಳಿಯುತ್ತಿರುವುದಾಗಿ ರಾಜ್ಯಪಾಲರು ತಿಳಿಸಿದ್ದರು. ರಾಜ್ಯಪಾಲರು ಮತ್ತು ಸರ್ಕಾರ ಮುಖಾಮುಖಿಯಾಗಬಾರದು ಮತ್ತು ರಾಜ್ಯಪಾಲರು ವಿಶ್ವವಿದ್ಯಾಲಯಗಳ ಕುಲಪತಿಯಾಗಿ ಮುಂದುವರಿಯಲು ಸರ್ಕಾರ ಆಸಕ್ತಿ ಹೊಂದಿದೆ ಎಂದು ಪತ್ರದಲ್ಲಿ ತಿಳಿಸಲಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries