ತಿರುವನಂತಪುರ: ಕೇರಳದಲ್ಲಿ ಇಂದು 41,668 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ತಿರುವನಂತಪುರ 7896, ಎರ್ನಾಕುಳಂ 7339, ಕೋಝಿಕ್ಕೋಡ್ 4143, ತ್ರಿಶೂರ್ 3667, ಕೊಟ್ಟಾಯಂ 3182, ಕೊಲ್ಲಂ 2660, ಪಾಲಕ್ಕಾಡ್ 2345, ಮಲಪ್ಪುರಂ 2148, ಕಣ್ಣೂರು 2015, ಆಲಪ್ಪುಳ 1708, ಪತ್ತನಂತಿಟ್ಟ 1708, ಇಡುಕ್ಕಿ 1354,ವಯನಾಡ್ 850, ಕಾಸರಗೋಡು 563 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 95,218 ಮಾದರಿಗಳನ್ನು ಪರೀಕ್ಷಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,55,438 ಮಂದಿ ಜನರು ನಿಗಾದಲ್ಲಿದ್ದಾರೆ. ಇವರಲ್ಲಿ 3,47,666 ಮಂದಿ ಮನೆ/ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದಾರೆ ಮತ್ತು 7,772 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 1139 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ, 2,23,548 ಕೊರೋನಾ ಪ್ರಕರಣಗಳಲ್ಲಿ, ಕೇವಲ 3% ವ್ಯಕ್ತಿಗಳು ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ 33 ಮಂದಿ ಮೃತರಾಗಿದ್ದಾರೆ. ಇದಲ್ಲದೆ, ಸುಪ್ರೀಂ ಕೋರ್ಟ್ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ 73 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 51,607ಕ್ಕೆ ಏರಿಕೆಯಾಗಿದೆ.
ಇಂದು,ಸೋಂಕು ಪತ್ತೆಯಾದವರಲ್ಲಿ 139 ಮಂದಿ ಜನರು ಹೊರ ರಾಜ್ಯದವರು. 36,693 ಮಂದಿ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. 4468 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ.ಇಂದು 368 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ.
ಈ ವರೆಗೆ 17,053 ಜನರಲ್ಲಿ ರೋಗ ಪತ್ತೆಯಾಗಿದ್ದು ಚಿಕಿತ್ಸೆ ನೀಡಲಾಗಿ, ರೋಗ ವಾಸಿಯಾಗಿದೆ. ತಿರುವನಂತಪುರ 2318, ಕೊಲ್ಲಂ 1259, ಪತ್ತನಂತಿಟ್ಟ 870, ಆಲಪ್ಪುಳ 585, ಕೊಟ್ಟಾಯಂ 966, ಇಡುಕ್ಕಿ 317, ಎರ್ನಾಕುಳಂ 4888, ತ್ರಿಶೂರ್ 1432, ಪಾಲಕ್ಕಾಡ್ 551, ಮಲಪ್ಪುರಂ 796, ಕೋಝಿಕ್ಕೋಡ್ 2434, ವಯನಾಡ್ 89, ಕಣ್ಣೂರು 440, ಕಾಸರಗೊಇಡು 108 ಮಂದಿ ಎಂಬಂತೆ ಗುಣಮುಖರಾಗಿದ್ದಾರೆ.

