ಕಾಸರಗಗೋಡು: ಕೇರಳದಲ್ಲಿ ಕೋವಿಡ್ ಸಂಖ್ಯೆ ಹೆಚ್ಚುತ್ತಿದ್ದರೂ, ಶಾಲಾತರಗತಿ ಮುಚ್ಚುವ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಸರ್ಕಾರ ತಿಳಿಸಿದೆ. ಶಾಲೆಗಳಲ್ಲಿ ಹೆಚ್ಚಿನ ಜಾಗ್ರತಾ ಕ್ರ ಕೈಗೊಳ್ಳಲು ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಸೋಮವಾರ ನಡೆದ ಕೋವಿಡ್ ಅವಲೋಕನಾ ಸಭೆಯಲ್ಲಿ ತೀರ್ಮಾನಿಸಲಾಯಿತು. ವಾರಾಂತ್ಯ ರಾತ್ರಿಕಾಲ ಕಫ್ರ್ಯೂ ತಕ್ಷಣಕ್ಕೆ ಜಾರಿಗೆ ತಾರದಿರಲು ಹಾಗೂ ವಿವಾಹ, ಮರಣಾನಂತರ ಕಾರ್ಯಕ್ರಮಗಳಿಗೆ 50ಜನರನ್ನು ಸೀಮಿತಗೊಳಿಸಲಾಗಿದೆ.
ಸಾರ್ವಜನಿಕವಾಗಿ ತುರ್ತಾಗಿ ನಡೆಸಬೇಕಾದ ಸಾಮಾಜಿಕ, ಸಾಂಸ್ಕøತಿಕ, ರಾಜಕೀಯ ಕಾರ್ಯಕ್ರಮಗಳನ್ನು ಆನ್ಲೈನ್ ಮೂಲಕ ನಡೆಸುವಂತೆಯೂ ತಿಳಿಸಲಾಗಿದೆ. ತುರ್ತು ಸಂದರ್ಶನ ನಡೆಸಬೇಕಾದಲ್ಲಿ ಸಾಮಾಜಿಕ ಅಂತರ ಪಾಲನೆ ಸೇರಿದಂತೆ ಕೋವಿಡ್ ಮಾನದಂಡ ಪಾಲಿಸಬೇಕು. ಸಾರ್ವಜನಿಕ ರ್ಯಾಲಿ, ಸಭೆ ಸಮಾರಂಭ ಕೈಬಿಡುವಂತೆಯೂ ಸೂಚಿಸಲಕಾಗಿದ್ದು, ರೋಗಹರಡುವಿಕೆ ಹೆಚ್ಚಾದಲ್ಲಿ ನಿಯಂತ್ರಣ ಮತ್ತಷ್ಟು ಬಲಪಡಿಸಲೂ ಸಭೆಯಲ್ಲಿ ತೀರ್ಮಾನಿಸಲಾಯಿತು.