HEALTH TIPS

ಕೋವಿಡ್-19ನಿಂದ ತೀವ್ರ ಆರ್ಥಿಕ ಕುಸಿತ ಉಂಟಾದರೂ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇ. 6.2ರಷ್ಟಿದೆ: ನಿರ್ಮಲಾ ಸೀತಾರಾಮನ್

         ನವದೆಹಲಿ: ಕೋವಿಡ್-19(COVID-19) ಸಾಂಕ್ರಾಮಿಕ ರೋಗದಿಂದ ಭಾರತೀಯ ಆರ್ಥಿಕತೆಯು ಅತಿದೊಡ್ಡ ಕುಸಿತವನ್ನು ಕಂಡಿದೆ. ಆದರೆ ಸರ್ಕಾರವು ಚಿಲ್ಲರೆ ಹಣದುಬ್ಬರವನ್ನು(Retail inflation) ಶೇಕಡಾ 6.2ಕ್ಕೆ ನಿಯಂತ್ರಿಸಲು ಸಮರ್ಥವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಹೇಳಿದ್ದಾರೆ.

          ಇಂದು ರಾಜ್ಯಸಭೆಯಲ್ಲಿ ಅವರು ಕೇಂದ್ರ ಬಜೆಟ್-2022ರ ಮೇಲಿನ ಚರ್ಚೆಯ ವೇಳೆ ಉತ್ತರಿಸಿದ ಅವರು, 2022-23 ಹಣಕಾಸು ವರ್ಷದ ಬಜೆಟ್, ನಿರಂತರತೆಗೆ ನಿಲ್ಲುವುದಲ್ಲದೆ, ತೆರಿಗೆಯ ಭವಿಷ್ಯದೊಂದಿಗೆ ಆರ್ಥಿಕತೆಗೆ ಸ್ಥಿರತೆಯನ್ನು ತರುತ್ತದೆ ಎಂದರು.

          ಆರ್ಥಿಕತೆಯ ಸ್ಥಿತ ಪುನಶ್ಚೇತನ ಮತ್ತು ಸ್ಥಿರತೆ ಬಜೆಟ್ ನ ಉದ್ದೇಶವಾಗಿದೆ. 2008-09ರಲ್ಲಿ ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿಕೆ ಉಂಟಾಗಿದ್ದಾಗ ಹಿಂದಿನ ಯುಪಿಎ ಸರ್ಕಾರದ ಸಾಧನೆಗೆ ಹೋಲಿಸಿದರೆ ಆಗ ಚಿಲ್ಲರೆ ಹಣದುಬ್ಬರ ಶೇಕಡಾ 9.1ರಷ್ಟಾಗಿತ್ತು. ಆದರೆ ಇಂದಿನ ಕೋವಿಡ್-19 ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಹಣದುಬ್ಬರ ಶೇಕಡಾ 6.2ರಷ್ಟಾಗಿದೆ ಎಂದು ತಮ್ಮ ಎನ್ ಡಿಎ ಸರ್ಕಾರವನ್ನು ಸಮರ್ಥಿಸಿಕೊಂಡರು.

           ಕೋವಿಡ್-19ನಿಂದ ಭಾರತದ ಆರ್ಥಿಕತೆ ತೀವ್ರ ಕುಸಿತ: 2008-09ರಲ್ಲಿ ಜಾಗತಿಕ ಆರ್ಥಿಕ ಕುಸಿತದ ಸಮಯದಲ್ಲಿ 2.12 ಲಕ್ಷ ಕೋಟಿ ನಷ್ಟಕ್ಕೆ ಹೋಲಿಸಿದರೆ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಭಾರತೀಯ ಆರ್ಥಿಕತೆಯು 9.57 ಲಕ್ಷ ಕೋಟಿ ನಷ್ಟವನ್ನು ಅನುಭವಿಸಿತು. ಬಂಡವಾಳ ವೆಚ್ಚವು ಆದಾಯದ ಮಾರ್ಗಕ್ಕಿಂತ ಹೆಚ್ಚು ಇರುವುದರಿಂದ ಸರ್ಕಾರವು ಆರ್ಥಿಕತೆಯನ್ನು ಹೆಚ್ಚಿಸಲು ಸಾರ್ವಜನಿಕ ಬಂಡವಾಳ ವೆಚ್ಚವನ್ನು ಹೆಚ್ಚಿಸಿದೆ ಎಂದು ಅವರು ಸದನಕ್ಕೆ ತಿಳಿಸಿದರು.

           ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅನೇಕ ಷೇರುಗಳ ಸೃಷ್ಟಿಗೆ ಕಾರಣವಾದ ಸ್ಟಾರ್ಟಪ್‌ಗಳನ್ನು ಸರ್ಕಾರವೂ ಪ್ರೋತ್ಸಾಹಿಸುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries