ಢಾಕಾ: ಬಾಂಗ್ಲಾದೇಶ ಪ್ರೀಮಿಯರ್ ಲೀಗ್(ಬಿಪಿಎಲ್ 2022) ಆರಂಭವಾದ ಕ್ಷಣದಿಂದ ಹಲವು ವಿಚಿತ್ರ ಘಟನೆಗಳು ನಡೆಯುತ್ತಿವೆ. ಬಿಪಿಎಲ್ ಅಂಗವಾಗಿ ಚಿತ್ತೋಗ್ರಾಮದ ಎಂಎ ಅಜೀಜ್ ಸ್ಟೇಡಿಯಂನಲ್ಲಿ ರಸೆಲ್ ಸೇರಿದಂತೆ ತಮೀಮ್ ಇಕ್ಬಾಲ್, ಮೊರ್ತಜಾ ಮತ್ತು ಮೊಹಮ್ಮದ್ ಶೆಹಜಾದ್ ಗಂಭೀರವಾಗಿ ಅಭ್ಯಾಸ ನಡೆಸುತ್ತಿದ್ದರು.
ಅದೇ ಸಮಯಕ್ಕೆ ಹೆಲಿಕಾಪ್ಟರ್ವೊಂದು ಕ್ರೀಡಾಂಗಣದಲ್ಲಿ ಇಳಿಯಿತು. ರಸೆಲ್ ಸೇರಿದಂತೆ ಉಳಿದ ಆಟಗಾರರು ಏನಾಗುತ್ತಿದೆಯೋ ಎಂದು ಭಯಭೀತರಾಗಿದ್ದರು. ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಆರೋಗ್ಯ ಸಮಸ್ಯೆಯಿಂದ ತುರ್ತು ಭೂಸ್ಪರ್ಶ ಮಾಡಬೇಕಾಯಿತು.
ಇದಕ್ಕೂ ಮುನ್ನ ಏರ್ ವೇಸ್ ಅಧಿಕಾರಿಗಳು ಜಿಲ್ಲಾಧಿಕಾರಿ ಹಾಗೂ ಕ್ರೀಡಾ ಸಂಘದವರೊಂದಿಗೆ ಮಾತನಾಡಿ ಅನುಮತಿಯನ್ನ ಪಡೆಯಲಾಗಿತ್ತು ನಂತರ ಚಟ್ಟೋಗ್ರಾಮ್ ಸ್ಟೇಡಿಯಂನಲ್ಲಿ ಅಧಿಕಾರಿಗಳು ಹೆಲಿಕಾಪ್ಟರ್ ಇಳಿಸಿದರು ಎಂದು ತಿಳಿದುಬಂದಿದೆ. ಆಂಬ್ಯುಲೆನ್ಸ್ನಲ್ಲಿ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ಇದರೊಂದಿಗೆ ಪರಿಸ್ಥಿತಿ ತಿಳಿಗೊಂಡಿತು.
ಈ ವಿಷಯ ತಿಳಿಯದೆ ಆಟಗಾರರು ಕೊಂಚ ಗೊಂದಲಕ್ಕೊಳಗಾದರು. ಸದ್ಯ ಇದನ್ನು ಬಿಪಿಎಲ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ಸುದ್ದಿ ನೋಡಿದವರು ಈ ವರ್ಷ ಬಿಪಿಎಲ್ನಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿವೆ ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.