ಕುಂಬಳೆ: ಪಿಡಿಪಿ ಅಧ್ಯಕ್ಷ ಅಬ್ದುಲ್ ನಾಸರ್ ಮದನಿಯನ್ನು ಅಕ್ರಮವಾಗಿ ಬಂಧಿಸಿ ಗಡಿಪಾರು ಗೊಳಿಸಿ ಮಾರ್ಚ್ 31ಕ್ಕೆ 25 ವರ್ಷ ಪೂರ್ಣಗೊಳ್ಳುವುದು ಫ್ಯಾಸಿಸ್ಟ ಭೀಕರತೆಯ ಬಲಿಯಾದ ಆಗಿ 25 ವರ್ಷಗಳನ್ನು ಕಾರಾಗೃಹದಲ್ಲಿ ಯೂ ಕಾರಾಗ್ರಹ ಸಮಾನವಾದ ಬೆಂಗಳೂರಿನ ಗೃಹಬಂಧನದಲ್ಲಿ ಕಳೆಯುತ್ತಿರುವ ಅಬ್ದುಲ್ ನಾಸರ್ ಮದನಿಯವರ ನ್ಯಾಯ ನಿಷೇಧ ಪ್ರತಿಭಟಿಸಿ ಪಿಡಿಪಿ ಮಾರ್ಚ್ 31 ರಂದು ಸಂಜೆ 4 ಗಂಟೆಗೆ ಹೊಸಂಗಡಿ ಪೊಂದುರ ಸಿರಾಜ್ ನಗರದಲ್ಲಿ ಮಾನವಹಕ್ಕು ಸಂರಕ್ಷಣಾ ಸಮಾವೇಶ ನಡೆಸಲಿದೆ ಎಂದು ಪಿಡಿಪಿ ಮುಖಂಡರು ಕುಂಬಳೆಯಲ್ಲಿ ನಡೆಸಿದ
ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಮಾವೇಶವನ್ನು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಲಿರುವರು. ಪಿಡಿಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಿಸಾರ್ ಮೇತರ್ ಹಾಗೂ ಪಕ್ಷದ ಮುಖಂಡರು ಸಾಮಾಜಿಕ ನಾಯಕರು ಭಾಗವಹಿಸಲಿರುವರು ಎಂದುಪಿಡಿಪಿ ನೇತಾರರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.