HEALTH TIPS

ಇದು ಕೇರಳ, ಉಕ್ರೇನ್ ಅಲ್ಲ, ನಮಗೆ ಅಭಿವೃದ್ಧಿ ಬೇಕು, ವಿನಾಶವಲ್ಲ; ಕೆ ರೈಲ್ ವಿರುದ್ಧ ಮೇಧಾ ಪಾಟ್ಕರ್ ವಾಗ್ದಾಳಿ

             ತಿರುವನಂತಪುರ: ಕೆ ರೈಲು ಯೋಜನೆಗೆ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ತೀವ್ರ ಟೀಕೆ ಮಾಡಿದ್ದಾರೆ. ಅಭಿವೃದ್ಧಿ ನಾಶವಲ್ಲ. ಇದು ಕೇರಳ, ಉಕ್ರೇನ್ ಅಲ್ಲ. ಸಿಲ್ವರ್‍ಲೈನ್ ವಿಫಲವಾದ ಯೋಜನೆಯಾಗಿದೆ ಎಂದು ಅವರು ಗಮನಸೆಳೆದರು.

                   ಪ್ರವಾಹದ ನಂತರ ಕೇರಳ ತನ್ನ ಅಭಿವೃದ್ಧಿ ಮಾದರಿಯನ್ನು ಸರಿಪಡಿಸುತ್ತದೆ ಎಂದು ಭಾವಿಸಲಾಗಿತ್ತು. ಕೆ ರೈಲು ಯೋಜನೆಯ ಸಾಮಾಜಿಕ ಪರಿಣಾಮದ ಅಧ್ಯಯನವೂ ನಡೆದಿಲ್ಲ. ಸಂಸತ್ತಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ನಂತರ ಹಲ್ಲೆಗೊಳಗಾದ ಸಂಸದರನ್ನು ಭೇಟಿ ಮಾಡಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಿದ್ಧರಾಗಿರಬೇಕು ಎಂದು ಒತ್ತಾಯಿಸಿದರು. ಮೇಧಾ ಪಾಟ್ಕರ್ ಸಿಲ್ವರ್ ಲೈನ್ ವಿರೋಧಿ ಜನತಾ ಸಮಿತಿಯ ಸೆಕ್ರೆಟರಿಯೇಟ್ ಮಾರ್ಚ್ ಉದ್ಘಾಟಿಸಿ ಮಾತನಾಡುತ್ತಿದ್ದರು.

             ಏತನ್ಮಧ್ಯೆ, ರಾಜ್ಯದಲ್ಲಿ ಕೆ ರೈಲು ಯೋಜನೆ ವಿರುದ್ಧ ತೀವ್ರ ಸಾರ್ವಜನಿಕ ಆಕ್ರೋಶದ ನಡುವೆ ಮುಖ್ಯಮಂತ್ರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಸಂಸತ್ ಭವನದಲ್ಲಿರುವ ಪ್ರಧಾನಿ ಕಚೇರಿಯಲ್ಲಿ ಭೇಟಿ  ನಡೆದಿದೆ.

                   ಸಭೆಯ ನಂತರ ಮಾತನಾಡಿದ ಮುಖ್ಯಮಂತ್ರಿಗಳು, ಪ್ರಧಾನಿಯವರು ತಮ್ಮ ಮಾತುಗಳನ್ನು ಬಹಳ ಆಸಕ್ತಿಯಿಂದ ಆಲಿಸಿದ್ದಾರೆ. ಪ್ರತಿಕ್ರಿಯೆಗಳು ಆರೋಗ್ಯಕರವಾಗಿವೆ. ಒಟ್ಟಿನಲ್ಲಿ ಪ್ರಧಾನಿಯವರೊಂದಿಗೆ ಉತ್ತಮ ಚರ್ಚೆಗಳು ನಡೆದವು ಎಂದಿರುವರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries