ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಸಿಪಿಎಂನ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರಾದ ಶಶಿ ತರೂರ್ ಮತ್ತು ಮಾಜಿ ಕೇಂದ್ರ ಸಚಿವ ಕೆವಿ ಥಾಮಸ್ ಅವರನ್ನು ಆಹ್ವಾನಿಸಲಾಗಿದೆ. ಏಪ್ರಿಲ್ 6ರಿಂದ 10ರವರೆಗೆ ಕಣ್ಣೂರಿನಲ್ಲಿ ನಡೆಯಲಿರುವ 23ನೇ ಪಕ್ಷದ ಕಾಂಗ್ರೆಸ್ಗೆ ನಾಯಕರನ್ನು ಆಹ್ವಾನಿಸಲಾಗಿತ್ತು.
ಜಾತ್ಯತೀತತೆ ಮತ್ತು ಸವಾಲುಗಳ ವಿಚಾರ ಸಂಕಿರಣಕ್ಕೆ ಶಶಿ ತರೂರ್ ಅವರನ್ನು ಆಹ್ವಾನಿಸಲಾಗಿದೆ. ರಾಜ್ಯ-ಕೇಂದ್ರ ಸಂಬಂಧಗಳ ವಿಚಾರ ಸಂಕಿರಣಕ್ಕೆ ಕೆ.ವಿ.ಥಾಮಸ್ ಅವರನ್ನು ಆಹ್ವಾನಿಸಲಾಗಿದೆ. ಸಿಪಿಎಂನ ಇಂತಹ ಕಾರ್ಯಕ್ರಮಗಳಲ್ಲಿ ಹಿರಿಯ ನಾಯಕರು ಭಾಗವಹಿಸುವುದರಿಂದ ಪಕ್ಷದ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗಲಿದ್ದು, ಇಬ್ಬರೂ ನಾಯಕರು ವಿಚಾರ ಸಂಕಿರಣದಿಂದ ದೂರವಿರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಹೇಳಿದ್ದರು.