HEALTH TIPS

ಕೆ-ರೈಲು ಕಾರಣ ನೀಡಿ ಬ್ಯಾಂಕ್ ಗಳಿಗೆ ಸಾಲ ನಿರಾಕರಿಸಲು ಅವಕಾಶವಿಲ್ಲ: ಜಮೀನು ಒತ್ತೆ ಇಟ್ಟು ಬ್ಯಾಂಕ್ ನಿಂದ ಸಾಲ ಪಡೆಯಲು ಯಾವುದೇ ಅಡ್ಡಿ ಇಲ್ಲ ಎಂದ ಸಚಿವ ಕೆ.ಎನ್.ಬಾಲಗೋಪಾಲ್


      ತಿರುವನಂತಪುರ: ಕೆ-ರೈಲ್‌ಗೆ ಸರ್ವೆ ಕಲ್ಲು ಅಳವವಡಿಸಿದ ಕಾರಣ ನೀಡಿ  ಬ್ಯಾಂಕ್‌ಗಳು ಸಾಲ ತಡೆಹಿಡಿಯಲು ಅವಕಾಶವಿಲ್ಲ ಎಂದು ಸಚಿವ ಕೆ.ಎನ್.ಬಾಲಗೋಪಾಲ್ ಪುನರುಚ್ಚರಿಸಿದ್ದಾರೆ.  ಬ್ಯಾಂಕರ್‌ಗಳ ಸಮಿತಿಯು ವಿಷಯಗಳನ್ನು ನಿರ್ಧರಿಸುತ್ತದೆ. ಸರ್ವೇಕಲ್ಲಿನ  ಆಧಾರದ ಮೇಲೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುವುದಿಲ್ಲ.  ಜನರನ್ನು ಬೆದರಿಸಲು ಬ್ಯಾಂಕುಗಳು ಪ್ರಯತ್ನಿಸಬಾರದು ಎಂದು ಹಣಕಾಸು ಸಚಿವರು ತಿರುವನಂತಪುರದಲ್ಲಿ ಹೇಳಿದ್ದಾರೆ.
         ಗಡಿಕಲ್ಲು ಅಳವಡಿಸಲಾಗಿದೆ ಎಂದು ಭಾವಿಸಿ ಜಮೀನಿಗೆ ಸಾಲ ಸಿಗುವುದಿಲ್ಲ ಎಂಬುದು ಸುಳ್ಳು ಪ್ರಚಾರ.  ಕಲ್ಲು ನಿರ್ಮಿಸಿ ಗುರುತಿಸಿದ ಭೂಮಿಯನ್ನು ಒತ್ತೆ ಇಟ್ಟು ಬ್ಯಾಂಕ್ ನಲ್ಲಿ ಸಾಲ ಪಡೆಯಲು ಅಡ್ಡಿಯಿಲ್ಲ ಎಂದು ಕೆ.ಎನ್.ಬಾಲಗೋಪಾಲ್ ಸ್ಪಷ್ಟಪಡಿಸಿದರು.
       ಪತ್ತನಂತಿಟ್ಟದಲ್ಲಿ ಸಿಲ್ವರ್ ಲೈನ್ ಯೋಜನೆಗಾಗಿ ಸರ್ವೆ ಮಾಡಲಾದ  ಭೂಮಿಗೆ ಬ್ಯಾಂಕ್  ಕುನ್ನಂತನಂ ನಿವಾಸಿಗೆ ಸಾಲವನ್ನು ನಿರಾಕರಿಸಿದೆ.  ಇಂತಹ ಘಟನೆಗಳು ಕೆಲವೆಡೆ ಮಾತ್ರ ಎಂದು ಹಣಕಾಸು ಸಚಿವರು ಪ್ರತಿಕ್ರಿಯಿಸಿದ್ದಾರೆ.  ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶಿಸಿ ಬ್ಯಾಂಕರ್‌ಗಳ ಸಮಿತಿಯೊಂದಿಗೆ ಚರ್ಚಿಸುವುದಾಗಿ ಹಣಕಾಸು ಸಚಿವರು ತಿಳಿಸಿದ್ದಾರೆ.  ಕೆ-ರೈಲ್ ಸರ್ವೇ ಪ್ರದೇಶಗಳಲ್ಲಿ ಸಾಲ ನಿರಾಕರಣೆ ಘಟನೆಗಳು ಪುನರಾವರ್ತನೆಯಾದಲ್ಲಿ ಬ್ಯಾಂಕ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹಣಕಾಸು ಸಚಿವರ ಪ್ರತಿಕ್ರಿಯೆ ನಿಡಿರುವರು.
       ಇದೇ ವೇಳೆ, ಅನೇಕ ಜನರು ಇದೇ ರೀತಿಯ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ.  ಕೆ ರೈಲು ಪ್ರದೇಶದಲ್ಲಿ  ಭೂಮಿ ಇದೆ ಎಂದು ಗುರುತಿಸಿದರೆ ಬ್ಯಾಂಕ್ ಗಳು ಇತರೆ ಕಾರಣ ನೀಡಿ ಸಾಲ ನಿರಾಕರಿಸುತ್ತಿವೆ ಎಂಬ ದೂರುಗಳೂ ದಟ್ಟವಾಗಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries