HEALTH TIPS

ಯಾತ್ರಾರ್ಥಿಗಳ ಆಟೋ ಧ್ವಂಸ; ಚಕ್ರದ ಗಾಳಿ ತೆಗೆದು ಪ್ರಯಾಣಕ್ಕೆ ಅಡ್ಡಿ: ಕೋಝಿಕ್ಕೋಡ್‍ನಲ್ಲಿ ವ್ಯಾಪಕ ಹಿಂಸಾಚಾರ

                 ಕೋಝಿಕ್ಕೋಡ್: ಸಾರ್ವಜನಿಕ ಸಾರಿಗೆ ಮತ್ತು ವ್ಯಾಪಾರವನ್ನು ಸ್ಥಗಿತಗೊಳಿಸುವಂತೆ ಜಂಟಿ ಕಾರ್ಮಿಕ ಸಂಘಟನೆ ಕರೆ ನೀಡಿರುವ ಮುಷ್ಕರಕ್ಕೆ ರಾಜ್ಯದ ಹಲವೆಡೆ ವ್ಯಾಪಕ ದಾಳಿ ನಡೆದಿದೆ. ಕೋಝಿಕ್ಕೋಡ್ ಜಿಲ್ಲೆಯಲ್ಲಿ ಪ್ರತಿಭಟನಾಕಾರರು ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ.

                  ಅಶೋಕಪುರಂನಲ್ಲಿ ಮುಷ್ಕರ ನಿರತರು ಆಟೋರಿಕ್ಷಾದ ಗಾಜುಗಳನ್ನು ಒಡೆದು ಪ್ರಯಾಣಿಸುತ್ತಿದ್ದ ಕುಟುಂಬ ಸದಸ್ಯರಿಗೆ  ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆಟೋರಿಕ್ಷಾ ಕಾರ್ಮಿಕ ಲಿಬಿಜಿತ್ ಮತ್ತು ಆತನ ಕುಟುಂಬದ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದಾರೆ. ಮಕ್ಕಳಿಗೆ ಬೆದರಿಕೆ ಹಾಕಿರುವ ದೂರುಗಳೂ ಇವೆ.

                    ಅಶೋಕಪುರಂನಿಂದ ಕೊಯಿಲಾಂಡಿ ಕೊಲ್ಲಂ ಪಿಶಾರಿಕಾವು ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ದಾಳಿ ನಡೆದಿದೆ. ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿದರೂ ಪ್ರತಿಭಟನಾಕಾರರು ಹಿಂದೆ ಸರಿಯಲಿಲ್ಲ ಎಂಬುದು ಕುಟುಂಬದವರ ಆರೋಪ.

                 ಆಟೋರಿಕ್ಷಾದ ಗಾಜು ಒಡೆದು ಟಯರ್ ನ ಗಾಳಿ ತೆಗೆಯಲಾಯಿತು. ಘಟನೆ ಸಂಬಂಧ ಕಸಬಾ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಹಲವೆಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಹರತಾಳವಾಗಿ ಮಾರ್ಪಟ್ಟಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries