HEALTH TIPS

ಆಸ್ಟ್ರಿಯಾ, ಸ್ಲೊವೇನಿಯಾ, ಇಟಲಿಯಲ್ಲಿ ಸದ್ಗುರು ಮಣ್ಣು ರಕ್ಷಿಸಿ ಅಭಿಯಾನದ ಪ್ರತಿಧ್ವನಿ..

      ರೋಮ್​: ಮಣ್ಣು ರಕ್ಷಣೆ ಸಲುವಾಗಿ ಈಶ ಫೌಂಡೇಷನ್​ನ ಸದ್ಗುರು ಕೈಗೊಂಡಿರುವ ಮಣ್ಣು ರಕ್ಷಿಸಿ ಅಭಿಯಾನ ಲಂಡನ್​ನಲ್ಲಿ ಆರಂಭಗೊಂಡಿದ್ದು, ಇದೀಗ ಐರೋಪ್ಯ ರಾಷ್ಟ್ರಗಳಾದ ಆಸ್ಟ್ರಿಯಾ, ಸ್ಲೊವೇನಿಯಾ ಮತ್ತು ಇಟಲಿಯಲ್ಲೂ ಪ್ರತಿಧ್ವನಿಸಿದೆ.


           ಮಣ್ಣು ರಕ್ಷಣೆ ಕುರಿತು ಜಾಗೃತಿ ಮೂಡಿಸಲು ಮಾ.21ರಂದು ಲಂಡನ್​ನಿಂದ ಏಕಾಂಗಿಯಾಗಿ ಬೈಕ್​ ಪ್ರಯಾಣ ಹೊರಟಿರುವ ಸದ್ಗುರು, 27 ರಾಷ್ಟ್ರಗಳಲ್ಲಿ ನೂರು ದಿನಗಳೊಳಗೆ ಒಟ್ಟು 30 ಸಾವಿರ ಕಿ.ಮೀ.

             ಸಂಚರಿಸುವ ಗುರಿ ಇರಿಸಿಕೊಂಡಿದ್ದು, ಸದ್ಯ ರೋಮ್​ ತಲುಪಿದ್ದಾರೆ.

ಪ್ರತಿದಿನ ಕನಿಷ್ಠ 10-15 ನಿಮಿಷ ಮೀಸಲಿಡಿ

  ಆಸ್ಟ್ರಿಯಾದ           ವಿಯೆನ್ನಾದಲ್ಲಿರುವ ಮ್ಯೂಸಿಯಮ್ಸ್​ ಕ್ವಾರ್ಟಿಯರ್​ಗೆ ಸದ್ಗುರು ಭೇಟಿ ನೀಡಿದ್ದು, ಅದರ ನಿರ್ದೇಶಕ ಬೆಟಿನಾ ಲೀಡ್ಲ್​ ಸದ್ಗುರುಗೆ ಆತ್ಮೀಯ ಸ್ವಾಗತ ಕೋರಿದರು. ನಂತರ ಸದ್ಗುರು ವಿಯೆನ್ನಾದಲ್ಲಿನ ರಾಯಭಾರ ಕಚೇರಿಗೆ ಭೇಟಿ ನೀಡಿದರು. ಅಲ್ಲಿ ಆಸ್ಟ್ರಿಯಾದಲ್ಲಿನ ಭಾರತದ ರಾಯಭಾರಿ ಜೈದೀಪ್ ಮಜುಮ್ದಾರ್​ ಸದ್ಗುರುವನ್ನು ಸ್ವಾಗತಿಸಿದರು. ಜನರು ಭೂಸ್ನೇಹಿಗಳಾಗಬೇಕು ಎಂದು ಕರೆ ನೀಡಿದ ಸದ್ಗುರು, ಪ್ರತಿಯೊಬ್ಬರೂ ಮಣ್ಣು ರಕ್ಷಣೆ ಸಲುವಾಗಿ ಪ್ರತಿ ದಿನ ಕನಿಷ್ಠ 10-15 ನಿಮಿಷ ಮೀಸಲಿಡಬೇಕು ಎಂದರು.

                            ಜಗತ್ತಿಗೇ ಸದ್ಗುರು ಭಾರತದ ರಾಯಭಾರಿ

  ಸ್ಲೊವೇನಿಯಾದಲ್ಲಿ           ಭಾರತೀಯ ರಾಯಭಾರ ಕಚೇರಿಗೆ ತೆರಳಿದ ಸದ್ಗುರು, ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿತ್ತಿದ್ದನ್ನೆಲ್ಲ ಬೆಳೆಯುವ ಮಣ್ಣಿನ ಅದ್ಭುತ ಶಕ್ತಿ ಕುರಿತು ವಿವರಿಸಿದರು. ಇನ್ನು ನಟ ಗೋರನ್​ ವಿಸ್ನ್​ಜಿಕ್​ ಜತೆ ಸಂವಾದ ನಡೆಸಿದ ಅವರು, ಮಣ್ಣು ರಕ್ಷಣೆ ಅಭಿಯಾನ ಕಾರ್ಯರೂಪಕ್ಕೆ ಬರುವಲ್ಲಿ ಸರ್ಕಾರಗಳಿಗೆ ಮನವರಿಕೆ ಮಾಡಿಕೊಡುವ ಅಗತ್ಯವನ್ನು ತಿಳಿಸಿದರು. ಸ್ಲೊವೇನಿಯಾದಲ್ಲಿನ ಭಾರತದ ರಾಯಭಾರಿ ನಮ್ರತಾ ಎಸ್​. ಕುಮಾರ್ ಮಾತನಾಡಿ, ಜಗತ್ತಿಗೇ ಸದ್ಗುರು ಭಾರತದ ರಾಯಭಾರಿ ಎಂದು ಬಣ್ಣಿಸಿದರು.

                            ಅಭಿಯಾನಕ್ಕೆ ಕಲಾತ್ಮಕ ಕಳೆ

  ರೋಮ್​ನಲ್ಲಿ ಮಣ್ಣು           ರಕ್ಷಿಸಿ ಕುರಿತಾಗಿ ಐವರು ಇಟಾಲಿಯನ್ ಕಲಾವಿದರು ನೀಡಿದ ಕಚೇರಿ ಅಭಿಯಾನಕ್ಕೆ ಕಲಾತ್ಮಕ ಕಳೆಯನ್ನು ನೀಡಿತು. ಅಲ್ಲಿ ಸದ್ಗುರು ಅವರು 'ರೋಮ' ಎಂಬ ಕವಿತೆಯನ್ನು ವಾಚಿಸಿದರು. ಯುನೈಟೆಡ್ ನೇಷನ್ಸ್​ ವರ್ಲ್ಡ್​ ಫುಟ್ ಪ್ರೋಗ್ರಾಮ್​ನ ಸಿಎಫ್​ಒ ಮತ್ತು ಅಸಿಸ್ಟೆಂಟ್ ಎಕ್ಸ್​ಕ್ಯೂಟಿವ್ ಡೈರೆಕ್ಟರ್ ಮನೋಜ್ ಜುನೇಜ ಮಾತನಾಡಿ, ಸದ್ಗುರು ಅವರ ಮಣ್ಣು ರಕ್ಷಿಸಿ ಅಭಿಯಾನಕ್ಕೆ ತಮ್ಮ ಬೆಂಬಲ ಘೋಷಿಸಿದರು. ಇದಕ್ಕೂ ಮೊದಲು ವೆನಿಸ್​ ತಲುಪಿದ್ದ ಸದ್ಗುರು, ಅಲ್ಲಿನ ಯುನಿವರ್ಸಿಟ ಕಾ ಫಾಸ್ಕರಿಯಲ್ಲಿ ಪರಿಣತರ ಜತೆ ಜಗತ್ತಿನಲ್ಲಿ ಮಣ್ಣು ರಕ್ಷಣೆಯ ಅಗತ್ಯದ ಕುರಿತು ಸಂವಾದ ನಡೆಸಿದರು.

             ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ಮ್ಯೂಸಿಯಮ್ಸ್​ ಕ್ವಾರ್ಟಿಯರ್​ಗೆ ಸದ್ಗುರು ಭೇಟಿ ನೀಡಿದ್ದು, ಅದರ ನಿರ್ದೇಶಕ ಬೆಟಿನಾ ಲೀಡ್ಲ್​ ಸದ್ಗುರುಗೆ ಆತ್ಮೀಯ ಸ್ವಾಗತ ಕೋರಿದರು. ನಂತರ ಸದ್ಗುರು ವಿಯೆನ್ನಾದಲ್ಲಿನ ರಾಯಭಾರ ಕಚೇರಿಗೆ ಭೇಟಿ ನೀಡಿದರು. ಅಲ್ಲಿ ಆಸ್ಟ್ರಿಯಾದಲ್ಲಿನ ಭಾರತದ ರಾಯಭಾರಿ ಜೈದೀಪ್ ಮಜುಮ್ದಾರ್​ ಸದ್ಗುರುವನ್ನು ಸ್ವಾಗತಿಸಿದರು. ಜನರು ಭೂಸ್ನೇಹಿಗಳಾಗಬೇಕು ಎಂದು ಕರೆ ನೀಡಿದ ಸದ್ಗುರು, ಪ್ರತಿಯೊಬ್ಬರೂ ಮಣ್ಣು ರಕ್ಷಣೆ ಸಲುವಾಗಿ ಪ್ರತಿ ದಿನ ಕನಿಷ್ಠ 10-15 ನಿಮಿಷ ಮೀಸಲಿಡಬೇಕು ಎಂದರು.

                ಸ್ಲೊವೇನಿಯಾದಲ್ಲಿ ಭಾರತೀಯ ರಾಯಭಾರ ಕಚೇರಿಗೆ ತೆರಳಿದ ಸದ್ಗುರು, ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿತ್ತಿದ್ದನ್ನೆಲ್ಲ ಬೆಳೆಯುವ ಮಣ್ಣಿನ ಅದ್ಭುತ ಶಕ್ತಿ ಕುರಿತು ವಿವರಿಸಿದರು. ಇನ್ನು ನಟ ಗೋರನ್​ ವಿಸ್ನ್​ಜಿಕ್​ ಜತೆ ಸಂವಾದ ನಡೆಸಿದ ಅವರು, ಮಣ್ಣು ರಕ್ಷಣೆ ಅಭಿಯಾನ ಕಾರ್ಯರೂಪಕ್ಕೆ ಬರುವಲ್ಲಿ ಸರ್ಕಾರಗಳಿಗೆ ಮನವರಿಕೆ ಮಾಡಿಕೊಡುವ ಅಗತ್ಯವನ್ನು ತಿಳಿಸಿದರು. ಸ್ಲೊವೇನಿಯಾದಲ್ಲಿನ ಭಾರತದ ರಾಯಭಾರಿ ನಮ್ರತಾ ಎಸ್​. ಕುಮಾರ್ ಮಾತನಾಡಿ, ಜಗತ್ತಿಗೇ ಸದ್ಗುರು ಭಾರತದ ರಾಯಭಾರಿ ಎಂದು ಬಣ್ಣಿಸಿದರು.

              ರೋಮ್​ನಲ್ಲಿ ಮಣ್ಣು ರಕ್ಷಿಸಿ ಕುರಿತಾಗಿ ಐವರು ಇಟಾಲಿಯನ್ ಕಲಾವಿದರು ನೀಡಿದ ಕಚೇರಿ ಅಭಿಯಾನಕ್ಕೆ ಕಲಾತ್ಮಕ ಕಳೆಯನ್ನು ನೀಡಿತು. ಅಲ್ಲಿ ಸದ್ಗುರು ಅವರು 'ರೋಮ' ಎಂಬ ಕವಿತೆಯನ್ನು ವಾಚಿಸಿದರು. ಯುನೈಟೆಡ್ ನೇಷನ್ಸ್​ ವರ್ಲ್ಡ್​ ಫುಟ್ ಪ್ರೋಗ್ರಾಮ್​ನ ಸಿಎಫ್​ಒ ಮತ್ತು ಅಸಿಸ್ಟೆಂಟ್ ಎಕ್ಸ್​ಕ್ಯೂಟಿವ್ ಡೈರೆಕ್ಟರ್ ಮನೋಜ್ ಜುನೇಜ ಮಾತನಾಡಿ, ಸದ್ಗುರು ಅವರ ಮಣ್ಣು ರಕ್ಷಿಸಿ ಅಭಿಯಾನಕ್ಕೆ ತಮ್ಮ ಬೆಂಬಲ ಘೋಷಿಸಿದರು. ಇದಕ್ಕೂ ಮೊದಲು ವೆನಿಸ್​ ತಲುಪಿದ್ದ ಸದ್ಗುರು, ಅಲ್ಲಿನ ಯುನಿವರ್ಸಿಟ ಕಾ ಫಾಸ್ಕರಿಯಲ್ಲಿ ಪರಿಣತರ ಜತೆ ಜಗತ್ತಿನಲ್ಲಿ ಮಣ್ಣು ರಕ್ಷಣೆಯ ಅಗತ್ಯದ ಕುರಿತು ಸಂವಾದ ನಡೆಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries