HEALTH TIPS

ಕೆ ಸ್ವಿಫ್ಟ್ ಉದ್ಘಾಟನಾ ಸಮಾರಂಭದಲ್ಲಿ ಸಿಐಟಿಯು ಸೇರಿದಂತೆ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ; ಕೆ.ಎಸ್.ಆರ್.ಟಿ.ಸಿಯಲ್ಲಿ ವೇತನ ಪಾವತಿಸುವಂತೆ ಒತ್ತಾಯ

                 ತಿರುವನಂತಪುರ: ಕೆ.ಎಸ್.ಆರ್.ಟಿ.ಸಿ ಸ್ವಿಫ್ಟ್ ಉದ್ಘಾಟನಾ ಸಮಾರಂಭದಲ್ಲಿ ಸಿಐಟಿಯು ಸೇರಿದಂತೆ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ವೇತನ ನೀಡದ ಹಿನ್ನೆಲೆಯಲ್ಲಿ ಸಿಐಟಿಯು ಸೇರಿದಂತೆ ಸಂಘಟನೆಗಳು ಧ್ವಜಾರೋಹಣ ಸಮಾರಂಭವನ್ನು ಬಹಿಷ್ಕರಿಸಿವೆ. ಉದ್ಘಾಟನಾ ಸ್ಥಳದಲ್ಲೇ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪೋಲಿಸರ ತೀವ್ರ ಎಚ್ಚರಿಕೆ ವಹಿಸಿದ್ದರು.  

                  40 ದಿನಗಳಿಗಿಂತ ಹೆಚ್ಚು ದಿನಗಳಿಂದ ವೇತನ ನೀಡದ ಕೆಎಸ್‍ಆರ್‍ಟಿಸಿ ನೌಕರರ ಸಮಸ್ಯೆಗಳಿಗೆ ಪರಿಹಾರ ಕಾಣದೆ ಸರ್ಕಾರದಿಂದ ಕೆ-ಸ್ವಿಫ್ಟ್ ಉದ್ಘಾಟನೆಯಾಗಿದೆ. ಆದರೆ, ಒಕ್ಕೂಟಗಳ ಪ್ರತಿಕ್ರಿಯೆ ಸಹಜವಾಗಿದ್ದು, ಹಣಕಾಸು ಸಚಿವಾಲಯದಿಂದ ಹೆಚ್ಚುವರಿ ನೆರವು ಕೋರಲಾಗಿದೆ ಎಂದು ಸಾರಿಗೆ ಸಚಿವ ಆಂಟನಿ ರಾಜು ತಿಳಿಸಿದ್ದಾರೆ.

                ಕೆ-ಸ್ವಿಫ್ಟ್ ನೇಮಕಾತಿ ಪ್ರಶ್ನಿಸಿ ಕಾರ್ಮಿಕ ಸಂಘಟನೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ಸಿಐಟಿಯು ಸೇರಿದಂತೆ ಟ್ರೇಡ್ ಯೂನಿಯನ್‍ಗಳು ಕೆ-ಸ್ವಿಫ್ಟ್ ಅನ್ನು ಫ್ಲ್ಯಾಗ್ ಆಫ್ ಮಾಡುವ ದಿನವನ್ನು ಕರಿ ದಿನವನ್ನಾಗಿ ಆಚರಿಸಲಾಗುವುದು ಎಂದು ಘೋಷಿಸಿದ್ದವು. ಎಲ್ಲ ದೂರದ ಬಸ್‍ಗಳನ್ನು ಕೆ-ಸ್ವಿಫ್ಟ್‍ಗೆ ಬದಲಾಯಿಸಿದರೆ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ. ಅರ್ಜಿಯನ್ನು ನ್ಯಾಯಾಲಯವು ಪರಿಗಣಿಸುತ್ತಿರುವಾಗ ಕೆ-ಸ್ವಿಫ್ಟ್ ಅನ್ನು ಪ್ರಾರಂಭಿಸಲಾಯಿತು.

               ಕೆಎಸ್‍ಆರ್‍ಟಿಸಿ ಸ್ವಿಫ್ಟ್‍ನ ಮೊದಲ ಬಸ್ ಸೇವೆಗೆ ನಿನ್ನೆ  ಸಂಜೆ 5.30ಕ್ಕೆ ತಂಬಾನೂರು ಬಸ್ ಟರ್ಮಿನಲ್‍ನಿಂದ ಚಾಲನೆ ನೀಡಲಾಯಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಾರಿಗೆ ಸಚಿವ ಆಂಟನಿ ರಾಜು ವಹಿಸಿದ್ದರು. ಮೊದಲ ಹಂತದಲ್ಲಿ ಕೊಲ್ಲೂರು, ಚೆನ್ನೈ, ಬೆಂಗಳೂರು, ಮೈಸೂರು, ಕೊಯಮತ್ತೂರು, ನಾಗರ್‍ಕೋಯಿಲ್ ಮತ್ತು ಪಾಂಡಿಚೇರಿಗಳಿಗೆ ಸಂಚಾರ ಆರಂಭಿಸಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries