HEALTH TIPS

ಬೆದ್ರಡ್ಕ ನೀರಾಳ ದೈವಸ್ಥಾನ ಪ್ರತಿಷ್ಠಾ ಬ್ರಹ್ಮಕಲಶೋತ್ಸವ-ಆಮಂತ್ರಣಪತ್ರಿಕೆ ಬಿಡುಗಡೆ

                  ಕಾಸರಗೋಡು: ಬೆದ್ರಡ್ಕ ನೀರಾಳ ಶ್ರೀ ಧೂಮಾವತೀ ಮತ್ತು ಪರಿವಾರ ದೈವಗಳ ದೈವಸ್ಥಾನದ ಪ್ರತಿಷ್ಠಾ ಕಲಶೋತ್ಸವ ಜೂನ್ 7ರಿಂದ 9ರ ವರೆಗೆ ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣಪತ್ರಿಕೆ ಬಿಡುಗಡೆ ಸಮಾರಂಭ ದೈವಸ್ಥಾನ ವಠಾರದಲ್ಲಿ ಜರುಗಿತು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ.

                    ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್ ಶೆಟ್ಟಿ ಸಿರಿಬಾಗಿಲು ಅಡ್ಕ ಆಮಂತ್ರಣಪತ್ರಿಕೆ ಬಿಡುಗಡೆಗೊಳಿಸಿದರು. ಶ್ರೀ ಮಹಾದೇವ ದೇವಸ್ಥಾನದ ಆಡಳಿತ ಮೊಕ್ತೇಸರ ಶೀನ ಶೆಟ್ಟಿ ಕಜೆ, ಅರ್ಚಕ ವೆಂಕಟ್ರಮಣ ಹೊಳ್ಳ, ಸುಬ್ರಹ್ಮಣ್ಯ ನಾವಡ ನೀರಾಳ, ಈಶ್ವರ ಪೂಜಾರಿ ಮಾಣಿಗೆಹಿತ್ಲು, ಚಂದ್ರಶೇಖರ ಪೂಜಾರಿ ನೀರಾಳ, ಶಾಂಕರ ಪೂಜಾರಿ ಅಮ್ಚಿಗೆರೆ, ಬಟ್ಯಪ್ಪ ಪೂಜಾರಿ ಮಾಣಿಗೆ ಹಿತ್ಲು, ಶೀನ ಪೂಜಾರಿ ನೀರಾಳ, ಪುರುಷೋತ್ತಮ ಪೂಜಾರಿ ಮಾಣಿಗೆಹಿತ್ಲು, ಜಯಂತಿ ನೀರಾಳ, ಲಕ್ಷ್ಮಣ ಕಾಯಿಕೋಟೆ, ಜಗದೀಶ್ ನಾಯ್ಕಾಪು, ಸತೀಶ್ ನಡುಬೈಲು, ಜಯಂತ ನಡುಬೈಲು, ಚಂದ್ರ ನಾಯ್ಕಾಪು, ನಾರಾಯಣ ನಾಯ್ಕಾಪು, ತ್ಯಾಗರಾಜ್ ನೀರಾಳ, ವಿಶ್ವನಾಥ, ಬಾಬು ಪೂಜಾರಿ ಉಪಸ್ಥಿತರಿದ್ದರು.

              ಗೌರವ ಮಾರ್ಗದರ್ಶಕರಾಗಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಹಾಗೂ ಗೌರವಾಧ್ಯಕ್ಷರಾಗಿ ಪ್ರಭಾಕರ ಆಳ್ವ ಕೋಟೆಕುಂಜ, ಪುತ್ತೂರುಕೊಟ್ಯ ನಾರಾಯಣ ಪೂಜಾರಿ, ಪ್ರಭಾಕರ ಕಾರಂತ ದೇಶಮಂಗಲ, ಬಟ್ಯಪ್ಪ ಪೂಜಾರಿ ಮಾಣಿಗೆ ಹಿತ್ಲು ಸಮಿತಿ ಮುನ್ನಡೆಸುತ್ತಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries