ನವದೆಹಲಿ: ಶ್ರೀನಾರಾಯಣ ಗುರುಗಳಿಗೆ ಜನ್ಮ ನೀಡಿದ ಕೇರಳ ಪುಣ್ಯಭೂಮಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಶಿವಗಿರಿಯಿಂದ ಆಹ್ವಾನೀಡಿದ್ದರು. ಗುರು ಆಧ್ಯಾತ್ಮಿಕ ಬದುಕಿನ ಬೆಳಕಿಂಡಿ ಎಂದು ಪ್ರಧಾನಿ ಹೇಳಿದರು. ಶಿವಗಿರಿ ತೀರ್ಥೋದ್ಭವದ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಧಾನಿ ಮಲಯಾಳಂನಲ್ಲಿ ಭಾಷಣ ಆರಂಭಿಸಿದರು.
"ನನ್ನ ಪ್ರೀತಿಯ ಮಲಯಾಳಿಗಳಿಗೆ ನನ್ನ ನಮ್ರ ಪ್ರಾರ್ಥನೆಗಳು" ಎಂದು ಹೇಳುವ ಮೂಲಕ ಪ್ರಧಾನಿ ತಮ್ಮ ಉದ್ಘಾಟನಾ ಭಾಷಣವನ್ನು ಆರಂಭಿಸಿದರು. ಶ್ರೀ ನಾರಾಯಣ ಗುರುದೇವರು ಭಾರತದ ಆಧ್ಯಾತ್ಮಿಕ ಚೇತನ. ಅವರ ಹುಟ್ಟಿನಿಂದಲೇ ಶ್ರೀಮಂತಗೊಂಡ ಪುಣ್ಯಭೂಮಿ ಕೇರಳ. ಶಿವಗಿರಿಯು ಆಗಾಗ್ಗೆ ಕೇರಳದ ಪ್ರಗತಿಯಲ್ಲಿ ಗಮನಾರ್ಹ ಕೊಡುಗೆ ನೀಡಿದೆ. ಶಿವಗಿರಿ ಏಕ ಭಾರತ, ಭವ್ಯ ಭಾರತದ ಜನ್ಮಸ್ಥಳ ಎಂದು ಪ್ರಧಾನಿ ಹೇಳಿದರು.
ವರ್ಕಳವು ದಕ್ಷಿಣದ ಕಾಶಿ ಎಂದು ಪ್ರಧಾನಿ ಹೇಳಿದರು. ಗುರುಗಳು ಭಾರತೀಯ ಸಂಸ್ಕøತಿ ಮತ್ತು ಮೌಲ್ಯಗಳನ್ನು ಶ್ರೀಮಂತಗೊಳಿಸಿದರು. ಇತರರ ಭಾವನೆಗಳನ್ನು ಅರ್ಥಮಾಡಿಕೊಂಡು ತನ್ನದೇ ಕಲ್ಪನೆಯನ್ನು ಮಂಡಿಸಿದರು. ಗುರುಗಳು ಮತ್ತು ಸನ್ಯಾಸಿಗಳು ಧರ್ಮ ಸುಧಾರಣೆಯಲ್ಲಿ ಪ್ರಧಾನ ಹೆಬ್ಬಾಗಿಲಾಗಿ ಸುಧಾರಕರಾಗಿದ್ದಾರೆ. ಶ್ರೀನಾರಾಯಣ ಗುರುಗಳು ಮತಾಂಧತೆಯ ವಿರುದ್ಧ ಹೋರಾಡಿದ್ದರು ಮತ್ತು ಆಧುನಿಕತೆಯ ಬಗ್ಗೆ ಮಾತನಾಡಿದ್ದರು ಎಂದು ಪ್ರಧಾನಿ ಹೇಳಿದರು.





