ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆರ್ಥಿಕ, ವಿದೇಶಾಂಗ ನೀತಿಗಳ ಬಗ್ಗೆ ನಿರಂತರವಾಗಿ ಟೀಕೆ ಮಾಡುತ್ತಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ವಿನ್ಸ್ಟನ್ ಚರ್ಚಿಲ್ ಅವರ ಉದಾಹರಣೆಯನ್ನು ಕೊಟ್ಟಿದ್ದಾರೆ.
0
samarasasudhi
ಏಪ್ರಿಲ್ 13, 2022
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆರ್ಥಿಕ, ವಿದೇಶಾಂಗ ನೀತಿಗಳ ಬಗ್ಗೆ ನಿರಂತರವಾಗಿ ಟೀಕೆ ಮಾಡುತ್ತಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ವಿನ್ಸ್ಟನ್ ಚರ್ಚಿಲ್ ಅವರ ಉದಾಹರಣೆಯನ್ನು ಕೊಟ್ಟಿದ್ದಾರೆ.
ಸುಬ್ರಮಣಿಯನ್ ಸ್ವಾಮಿ ಅವರು ಆಡಳಿತ ಪಕ್ಷದ ನಾಯಕರಾಗಿದ್ದುಕೊಂಡು ಅವರದೇ ಸರ್ಕಾರದ ವಿರುದ್ಧ ಟೀಕೆ ಮಾಡುವ ಬಗ್ಗೆ ಹಲವರು ಆಗಾಗ ಪ್ರಶ್ನಿಸುವುದಿದೆ.
'1930ರಲ್ಲಿ ಚರ್ಚಿಲ್ ಹೇಳಿದಂತೆ, ಪ್ರತಿಪಕ್ಷಗಳ ನಾಲಿಗೆ ಕಟ್ಟಿಕೊಂಡಾಗ, ತನ್ನಂತಹ ಗುರುತಿಸಲ್ಪಟ್ಟ ಆಡಳಿತ ಪಕ್ಷದ ನಾಯಕರು ಸರ್ಕಾರದ ತಪ್ಪು ನೀತಿಗಳನ್ನು ಟೀಕಿಸಬೇಕಾಗುತ್ತದೆ' ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮೂಲಕ ಉತ್ತರಿಸಿದ್ದಾರೆ.