ಅಹಮದಾಬಾದ್: 'ವಿಶ್ವ ವ್ಯಾಪಾರ ಸಂಸ್ಥೆ ಒಪ್ಪಿದರೆ ವಿಶ್ವಕ್ಕೆ ಆಹಾರ ದಾಸ್ತಾನು ಪೂರೈಸಲು ಭಾರತ ಸಿದ್ಧವಿದೆ' ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
0
samarasasudhi
ಏಪ್ರಿಲ್ 12, 2022
ಅಹಮದಾಬಾದ್: 'ವಿಶ್ವ ವ್ಯಾಪಾರ ಸಂಸ್ಥೆ ಒಪ್ಪಿದರೆ ವಿಶ್ವಕ್ಕೆ ಆಹಾರ ದಾಸ್ತಾನು ಪೂರೈಸಲು ಭಾರತ ಸಿದ್ಧವಿದೆ' ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಮಂಗಳವಾರ ಅಹಮದಾಬಾದ್ ಬಳಿಯಲ್ಲಿನ ಅದಾಲಜ್ನಲ್ಲಿನ ಅನ್ನಪೂರ್ಣ ಧಾಮ ಟ್ರಸ್ಟ್ನ ಬಾಲಕರ ವಸತಿ ನಿಲಯವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ ಮೋದಿ, 'ನಾನು ಅಮೆರಿಕ ಅಧ್ಯಕ್ಷರೊಡನೆ ಮಾತನಾಡುವಾಗ ಆಹಾರ ದಾಸ್ತಾನಿನ ಕೊರತೆಯ ವಿಷಯವನ್ನ ಎತ್ತಿದರು.
'ರಷ್ಯಾ - ಉಕ್ರೇನ್ನ ಯುದ್ಧದಿಂದಾಗಿ ಜಗತ್ತಿನ ವಿವಿಧೆಡೆ ಆಹಾರದ ಅಭಾವ ಕಾಡುತ್ತಿದೆ. ಕೋವಿಡ್ ಸಾಂಕ್ರಾಮಿಕದ ಪರಿಣಾಮವಾಗಿ ಭಾರತದಲ್ಲಿ ಕಳೆದ ಎರಡು ವರ್ಷದಿಂದ ಸುಮಾರು 80 ಕೋಟಿ ಜನರಿಗೆ ಆಹಾರ ಧಾನ್ಯಗಳನ್ನ ಪೂರೈಸಲಾಗಿದೆ. ಇದು ಇತರ ರಾಷ್ಟ್ರಗಳಿಗೆ ಅಚ್ಚರಿ ಉಂಟು ಮಾಡಿದೆ. ಇಂದು ಯುದ್ಧದಿಂದಾಗಿ ಜಗತ್ತು ಮತ್ತೆ ಅನಿಶ್ಚಿತ ಸ್ಥಿತಿಯನ್ನ ಎದುರಿಸುತ್ತಿದೆ. ಎಲ್ಲ ಬಾಗಿಲುಗಳೂ ಮುಚ್ಚಿರುವುದರಿಂದ ತೈಲ ಉತ್ಪನ್ನಗಳನ್ನು ಸಂಗ್ರಹಿಸಲು ಕಷ್ಟಸಾಧ್ಯವಾಗುತ್ತಿದೆ. ಯುದ್ಧ ಪ್ರಾರಂಭವಾದಾಗಿನಿಂದ ಎಲ್ಲರೂ ತಮ್ಮ ದಾಸ್ತಾನನ್ನು ರಕ್ಷಿಸಿಕೊಳ್ಳಲು ಬಯಸುತ್ತಿದ್ದಾರೆ' ಎಂದು ಮೋದಿ ಹೇಳಿದರು.